Select Your Language

Notifications

webdunia
webdunia
webdunia
webdunia

ಸುಧಾಮೂರ್ತಿಯನ್ನು ಕಂಡು ವಿದ್ಯಾರ್ಥಿಗಳು ಪುಳಕ

ಸುಧಾಮೂರ್ತಿಯನ್ನು ಕಂಡು ವಿದ್ಯಾರ್ಥಿಗಳು ಪುಳಕ
bangalore , ಬುಧವಾರ, 4 ಮೇ 2022 (17:58 IST)
ಬಾಗಲಕೋಟೆ ಜಿಲ್ಲೆಯ ಬನಶಂಕರಿ ದೇವಸ್ಥಾನಕ್ಕೆ ಬಂದಿದ್ದ ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಅವರ ಸರಳತೆಯನ್ನು ಕಂಡು ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದಾರೆ. ಇತ್ತೀಚೆಗಷ್ಟೇ ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ದೇವಸ್ಥಾನ ಸುಧಾಮೂರ್ತಿ ಭೇಟಿ ನೀಡಿದ್ದರು. ಅಲ್ಲಿ ಸಾಮಾನ್ಯ ಭಕ್ತರಂತೆ ಭೇಟಿ ನೀಡಿದ್ದ ಸುಧಾ ಮೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಧಾಮೂರ್ತಿ ಸಾಮಾನ್ಯರಂತೆ ದೇವಿಯ ದರ್ಶನ ಪಡೆದು ಪೂಜಾ ಕಾರ್ಯ ಮುಗಿಸಿ ದೇಗುಲಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದರು. ಅವರ ಸರಳತೆಯನ್ನು ನೋಡಿ ಅಲ್ಲಿದ್ದ ಅನೇಕರು ಸುಧಾಮೂರ್ತಿ ಅವರನ್ನು ಗುರುತಿಸಿರಲಿಲ್ಲ.ಆ ವೇಳೆ ದೇಗುಲಕ್ಕೆ ಸಿಂದಗಿ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಂದಿದ್ದರು. ಅವರ ಜೊತೆಗಿದ್ದ ಶಿಕ್ಷಕರು ಸುಧಾಮೂರ್ತಿ ಬಂದಿರುವ ವಿಷಯವನ್ನು ಮಕ್ಕಳಿಗೆ ತಿಳಿಸಿದ್ದರು. ಆ ವಿದ್ಯಾರ್ಥಿಗಳೆಲ್ಲರೂ ಸುಧಾಮೂರ್ತಿಯ ಸರಳತೆಯನ್ನು ನೋಡಿ ಅಚ್ಚರಿಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ’