Select Your Language

Notifications

webdunia
webdunia
webdunia
Wednesday, 9 April 2025
webdunia

ವಿದ್ಯಾರ್ಥಿ ಮೇಲೆ ಹಲ್ಲೆ; ಕಾಲೇಜ್ ಆಡಳಿತ ವಿರುದ್ಧ ಆಕ್ರೋಶ

ವಿದ್ಯಾರ್ಥಿ
ಆನೇಕಲ್ , ಸೋಮವಾರ, 11 ಮಾರ್ಚ್ 2019 (15:41 IST)
ಕಾಲೇಜು ವಿದ್ಯಾರ್ಥಿ ಮೇಲೆ ನಡೆದ ಹಲ್ಲೆ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆದಿದೆ.
ನ್ನೇರುಘಟ್ಟದ ಗೊಟ್ಟಿಗೆರೆಯಲ್ಲಿನ ಟಿ‌ ಜಾನ್ಸ್ ಕಾಲೇಜ್ ನಲ್ಲಿ  ವಿದ್ಯಾರ್ಥಿಯ ಮೇಲೆ ‌ಹಲ್ಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಕಾಲೇಜ್ ಅವರಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿದೆ. ಹಲ್ಲೆ ಮಾಡಿದ ಭದ್ರತಾ ಸಿಬ್ಬಂದಿ ಅಮಾನತ್ತಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿದೆ. ಪರ್ಷಾನ್ ಅನ್ನೋ ವಿದ್ಯಾರ್ಥಿಯ ಮೇಲೆ ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ಆಗಿ ಹಲ್ಲೆ ಮಾಡಿದ ಕಾಲೇಜಿನ ಸೆಕ್ಯುರಿಟಿ ಗಾರ್ಡ್ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆಯಿಂದ ಮನನೊಂದು ಕಾಲೇಜ್ ಬಿಟ್ಟ ವಿದ್ಯಾರ್ಥಿಯ ಪೋಷಕರು ಈಗ ಗರಂ ಆಗಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದೇ ಇರೋದ್ರಿಂದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ.

ಕಾಲೇಜಿನ ಗೇಟ್ ಬಂದ್ ಮಾಡಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರವನ್ನು ವಿದ್ಯಾರ್ಥಿಗಳು ಕೂಗಿದರು.  




Share this Story:

Follow Webdunia kannada

ಮುಂದಿನ ಸುದ್ದಿ

ನೀತಿ ಸಂಹಿತೆ ಉಲ್ಲಂಘಿಸಿ ಸೀತಾರಾಮ ಕಲ್ಯಾಣ ಪ್ರದರ್ಶನ