Webdunia - Bharat's app for daily news and videos

Install App

ತಿರುಪತಿಯಲ್ಲಿ ರಾಜ್ಯದ ಶಾಸಕರಿಗೆ ದರ್ಶನ ಭಾಗ್ಯ ಸಿಗುತ್ತಿಲ್ಲ: ಅಳಲು ತೋಡಿಕೊಂಡ ಜೆಡಿಎಸ್‌ ಶಾಸಕ

Sampriya
ಬುಧವಾರ, 19 ಮಾರ್ಚ್ 2025 (17:40 IST)
Photo Courtesy X
ಬೆಂಗಳೂರು: ತಿರುಪತಿಯಲ್ಲಿ ಕರ್ನಾಟಕದಿಂದ ಯಾವುದೇ ಶಾಸಕರಿಗೆ ದರ್ಶನ ಭಾಗ್ಯ ಸಿಗ್ತಿಲ್ಲ. ರಾಜ್ಯದ ಎಲ್ಲ ಶಾಸಕರಿಗೆ  ತಿರುಪತಿಯಲ್ಲಿ ದರ್ಶನ ಭಾಗ್ಯ ಕಲ್ಪಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸರವಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತೆಲಂಗಾಣದ ಶಾಸಕರು ಆಂಧ್ರಪ್ರದೇಶದ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಿರುಪತಿಯಲ್ಲಿ ದರ್ಶನ ಭಾಗ್ಯ ಬೇಕು ಅಂತ ಸರ್ಕಾರಿ ಆದೇಶ ಮಾಡಿಸಿಕೊಂಡಿದ್ದಾರೆ. ಅದರಂತೆ ಕರ್ನಾಟಕದ ಶಾಸಕರ ನಿಯೋಗಯು ಆಂಧ್ರಪ್ರದೇಶದ ಸಿಎಂ ಅವರನ್ನು ಭೇಟಿಯಾಗಿ ದರ್ಶನ ಭಾಗ್ಯ ಕಲ್ಪಿಸಬೇಕು ಅಂತ ಮನವಿ ಮಾಡಿದರು.

ತಿರುಪತಿಯಲ್ಲಿ ಕರ್ನಾಟಕ ಭವನ ಅತಿಥಿ ಗೃಹ ಅವ್ಯವಸ್ಥೆಯಿಂದ ಕೂಡಿದೆ. ಅದರ ನಿರ್ವಹಣೆ ಸರಿಯಾಗಿ ಮಾಡ್ತಿಲ್ಲ. ಸಿಬ್ಬಂದಿ ಇದ್ದರು ಯಾವುದೇ ನಿರ್ವಹಣೆ ಮಾಡುತ್ತಿಲ್ಲ. ಸಿಬ್ಬಂದಿಗಳಿಗೆ ಸಮವಸ್ತ್ರ ಕೊಡಬೇಕು, ಹಾಜರಾತಿ ಕಡ್ಡಾಯ ಮಾಡಬೇಕು. ಕರ್ನಾಟಕ ಭವನದಲ್ಲಿ ಅನ್ನ ದಾಸೋಹ ನಿಲ್ಲಿಸಿದ್ದು, ಅದನ್ನ ಪುನರ್ ಪ್ರಾರಂಭ ಮಾಡಬೇಕು ಎಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಅವರು ಆಗ್ರಹಿಸಿದ್ದಾರೆ.
 

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉತ್ತರಿಸಿ, ತಿರುಪತಿಯಲ್ಲಿ ಕರ್ನಾಟಕ ಭವನದ ನವೀಕರಣ ಕೆಲಸ ಆಗ್ತಿದೆ. ಎಲ್ಲಾ ‌ಕಾಮಗಾರಿ ಮುಗಿದ ಮೇಲೆ 4 ಸ್ಟಾರ್ ಮಾದರಿಯಲ್ಲಿ ವ್ಯವಸ್ಥೆ ಮಾಡೋ ಕೆಲಸ ಮಾಡ್ತೀವಿ. ಸಿಬ್ಬಂದಿಗೆ ಸಮವಸ್ತ್ರ ಕಡ್ಡಾಯ ಮಾಡೋ ವ್ಯವಸ್ಥೆ ಮಾಡ್ತೀವಿ. ಕರ್ನಾಟಕ ಭವನದ ಶೇ 60 ರೂಂ ಯಾರು ಬೇಕಾದ್ರು ಬುಕ್ ಮಾಡಿಕೊಳ್ಳಬಹುದು. ಶೇ40 ಕರ್ನಾಟಕದವರಿಗೆ ಮೀಸಲು ಇರಲಿದೆ ಅಂತ ತಿಳಿಸಿದರು.

ಕಾಶಿಯಲ್ಲಿ ನಮ್ಮ ಅತಿಥಿ ಗೃಹ ನೂರು ವರ್ಷ ಆಗಿದೆ ಅಂತ ಕಟ್ಟಡ ನೆಲಸಮ ಮಾಡಿದ್ದಾರೆ. ಆದಷ್ಟು ಬೇಗ ಕಾಶಿಯಲ್ಲಿ ಅತಿಥಿ ಗೃಹ ಕೆಲಸ ಪ್ರಾರಂಭ ಮಾಡಬೇಕು ಎಂದು ಹೇಳಿದರು.  ಅದಕ್ಕೂ ಉತ್ತಿರಿಸಿದ ಕಾಶಿಯಲ್ಲಿ ಕರ್ನಾಟಕ ಭವನ ನೂರು ವರ್ಷ ಆಗಿರೋದ್ರಿಂದ ಕಟ್ಟಡ ತೆಗೆಯಲಾಗಿದೆ. ಹೊಸ ಕಟ್ಟಡಕ್ಕೆ ₹36 ಕೋಟಿ ಹಣ ಬೇಕು.ಹೊಸ ಕಟ್ಟಡ ನಿರ್ಮಾಣದ ಕೆಲಸ ಆದಷ್ಟು ಬೇಗ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Covid 19: ಕೋವಿಡ್‌ಗೆ ರಾಜ್ಯದಲ್ಲಿ ಮೊದಲ ಬಲಿ, ಹೆಚ್ಚಿದ ಆತಂಕ

ಅವರೇ ಹೇಳಿರುವಂತೆ ನಾಯಿಯೇ ನಾರಾಯಣ, ಹಾಗಾದ್ರೆ ನಾರಾಯಣಸ್ವಾಮಿಯನ್ನು ಏನೆಂದು ಕರೆಯಬೇಕು: ಪ್ರಿಯಾಂಕ್ ಖರ್ಗೆ

Covid 19: ಭಾರತದ ಈ ನಗರದಲ್ಲಿ ಹೆಚ್ಚುತ್ತಿದೆ ಕೋವಿಡ್ 19 ಪ್ರಕರಣಗಳು

ಚಾಮರಾಜಪೇಟೆ ಪಾಕಿಸ್ತಾನದಲ್ಲಿದೆಯೋ ಭಾರತದಲ್ಲಿದೆಯೋ: ಬಿಜೆಪಿ ಆಕ್ರೋಶ

Karnataka Weather:ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿದೆ ಮಳೆ

ಮುಂದಿನ ಸುದ್ದಿ
Show comments