Webdunia - Bharat's app for daily news and videos

Install App

ಹೆಚ್.ಡಿ.ಕೆ. ಹೇಳಿಕೆಗೆ ಟಾಂಗ್ ನೀಡಿದ ಶ್ರೀರಾಮುಲು

Webdunia
ಬುಧವಾರ, 29 ಆಗಸ್ಟ್ 2018 (19:46 IST)
ಶಾಸಕ ಬಿ ಶ್ರೀರಾಮುಲು ಸರಕಾರಿ ಭೂ ಒತ್ತುವರಿ ಪ್ರಕರಣ ಹಿನ್ನೆಲೆ ಲೋಕಾಯುಕ್ತ ಎಡಿಜಿಪಿ  ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆದ ವಿಚಾರ ಕುರಿತಂತೆ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಮಾತನಾಡಿದ ರಾಮುಲು, ನನಗೆ ಕಾನೂನಿನ ಮೇಲೆ ಗೌರವ ಇದೆ.  ಅವರು ಎಲ್ಲಿ‌ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ. ಅವರು ಏನೇ ಮಾಡಿದ್ರೂ ನಾನು ರೆಡಿ ಇದ್ದೇನೆ ಎಂದರು. ಇದೆ ವೇಳೆ, ಸಾಲ ಮನ್ನಾ ಬಗ್ಗೆ ರಾಮುಲುಗೆ ಮಾತನಾಡುವ ನೈತಿಕತೆ ಇಲ್ಲ ಎಂದಿರುವ  ಸಿಎಂ ಹೆಚ್.ಡಿ.ಕೆ ಮಾತಿಗೆ ತಿರುಗೇಟು ನೀಡಿದರು. ಸಾಲ ಮನ್ನಾ ಬಗ್ಗೆ ಶ್ರೀರಾಮುಲು ಮಾತನಾಡದಿದ್ದರೆ ಬೇರೆ ಯಾರು ಮಾತಾಡ್ತಾರೆ. ಅವರು ಮಾಡಿದ್ದೇ ಆಟಾನಾ?ಎಂದು ಗರಂ ಆದರು.

ರೈತರಿಗೆ ಋಣಮುಕ್ತ ಮಾಡುವ ಬದಲು ಹೊಸ ಸಾಲ ಕೊಡ್ತಿಲ್ಲ. ಚಾಲ್ತಿ ಅಕೌಂಟ್ ಗಳು, ಚಾಲ್ತಿಯಲ್ಲಿರದ ಅಕೌಂಟ್ ಗಳು ಎಲ್ಲವೂ ರೈತರಿಗೆ ಗೊಂದಲ ಆಗ್ತಿದೆ ಎಂದರು. ಸಿದ್ದರಾಮಯ್ಯ ವಿದೇಶ ಪ್ರವಾಸ ಕುರಿತು ಕಿಡಿಕಾರಿದ ಶ್ರೀರಾಮುಲು, ಸಿದ್ರಾಮಯ್ಯ  ಯಾವ ಉದ್ದೇಶ ಇಟ್ಟಗೊಂಡು ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ರು ಆ ವಿಚಾರ ಮರೆತಿದ್ದಾರೆ. ಈಗ ವಿದೇಶ ಪ್ರವಾಸ ಹೊರಟಿದ್ದಾರೆ ಎಂದರು. ಚುನಾವಣೆಯಲ್ಲಿ ಗೆಲ್ಲಬೇಕೆಂಬ ಆಸೆ ಇಟ್ಗೊಂಡು ಸಿದ್ದರಾಮಯ್ಯ ಬಾದಾಮಿ  ಬಂದ್ರೆ ವಿನಃ ಇಲ್ಲಿನ‌ ಜನರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ದೂರಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments