Select Your Language

Notifications

webdunia
webdunia
webdunia
webdunia

ಸರಣಿ ಅಪಘಾತ: ಲೋಕಾಯುಕ್ತ ಎಸ್‌ಪಿ ಸೇರಿ 2 ಬಲಿ

ಸರಣಿ ಅಪಘಾತ: ಲೋಕಾಯುಕ್ತ ಎಸ್‌ಪಿ ಸೇರಿ 2 ಬಲಿ
ಮೈಸೂರು , ಗುರುವಾರ, 23 ಫೆಬ್ರವರಿ 2017 (07:40 IST)
ಭೀಕರ ಅಪಘಾತದಲ್ಲಿ ಲೋಕಾಯುಕ್ತ ಎಸ್‌ಪಿ ಸೇರಿ ಇಬ್ಬರು ದುರ್ಮರಣವನ್ನಪ್ಪಿದ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬುಧವಾರ ಸಂಜೆ ನಡೆದಿದೆ.
 
ರವಿಕುಮಾರ್(34) ಅವರು ತಮ್ಮ ಸ್ವಿಫ್ಟ್ ಕಾರಿನಲ್ಲಿ ಬೆಂಗಳೂರಿನಿಂದ  ಮೈಸೂರಿಗೆ ಪ್ರಯಾಣಿಸುತ್ತಿದ್ದಾಗ  ರಾಮೋಹಳ್ಳಿ ಸಮೀಪ ಅಪಘಾತ ಸಂಭವಿಸಿದೆ.
 
ಟಿಪ್ಪರ್‌ ವಾಹನವೊಂದು ರಸ್ತೆ ವಿಭಜಕವನ್ನು ದಾಟಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಯಾಯಿತು. ಬಳಿಕ ಆಟೋ ಮತ್ತಿತರ ವಾಹನಗಳಿಗೂ ಡಿಕ್ಕಿ ಹೊಡೆಯಿತು. ಇದರಿಂದ ಕಾರಿನಲ್ಲಿದ್ದ ರವಿಕುಮಾರ್ ಹಾಗೂ ಚಾಲಕ ಕಿರಣ್‌ಕುಮಾರ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
 
ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಗ್ರಾಮದ ರವಿಕುಮಾರ್ 2008ರಲ್ಲಿ ಡಿವೈಎಸ್‌ಪಿಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು.
 
ರವಿಕುಮಾರ್ ಅವರಿಗೆ 8 ದಿನಗಳ ಹಿಂದಷ್ಟೇ ಹೆಣ್ಣುಮಗು ಜನಿಸಿತ್ತು ಎಂದು ತಿಳಿದುಬಂದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಎನ್`ಕೌಂಟರ್ ಹೆಸರಲ್ಲಿ ಅಮಾಯಕರನ್ನ ಕೊಂದಿದ್ದ ನಾಲ್ವರು ಪೊಲೀಸರಿಗೆ ಜೀವಾವಧಿ ಶಿಕ್ಷೆ