Select Your Language

Notifications

webdunia
webdunia
webdunia
webdunia

ಆಸ್ತಿ ವಿಚಾರಕ್ಕೆ ಮಾವನ ಕೊಂದ ಅಳಿಯ

ಆಸ್ತಿ ವಿಚಾರಕ್ಕೆ ಮಾವನ ಕೊಂದ ಅಳಿಯ
ಹಾಸನ , ಗುರುವಾರ, 2 ನವೆಂಬರ್ 2023 (09:34 IST)
ಹಾಸನ: ಆಸ್ತಿ ವಿಚಾರವಾಗಿ ಕಿರಿಕ್ ಮಾಡುತ್ತಿದ್ದ ಸೋದರ ಮಾವನನ್ನು ಅಳಿಯನೇ ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ಸಾವಿತ್ರಮ್ಮ ಮತ್ತು ಅವರ ಸಹೋದರ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಜಗಳವಾಗುತ್ತಲೇ ಇರುತ್ತಿತ್ತು. ಈ ಬಾರಿಯೂ ಸಹೋದರ ಕುಡಿದ ಮತ್ತಿನಲ್ಲಿ ತಂಗಿಯ ಜೊತೆ ಜಗಳವಾಡಿದ್ದ. ಈ ವಿಚಾರವನ್ನು ಸಾವಿತ್ರಮ್ಮ ಮಗನಿಗೆ ಹೇಳಿದ್ದರು.

ಈ ವಿಚಾರವಾಗಿ ಸೋದರಮಾವನನ್ನು ಅಳಿಯ ಪ್ರಶ್ನಿಸಿದ್ದ. ಇಬ್ಬರ ನಡುವೆ ಜಗಳ ತಾರಕಕ್ಕೇರಿ ಅದೇ ಸಿಟ್ಟಿನ ಭರದಲ್ಲಿ ಅಳಿಯ ಮಾವನಿಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಮಾವ ಸಾವನ್ನಪ್ಪಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಸಿಡಿ ಕೇಸ್‌ನ್ನು ಸಿಬಿಐ ತನಿಖೆಗೆ ವಹಿಸಿ- ರಮೇಶ ಜಾರಕಿಹೊಳಿ