Publish Date: Tue, 10 Oct 2023 (14:20 IST)
Updated Date: Tue, 10 Oct 2023 (15:00 IST)
ಮಳೆಯ ಆರ್ಭಟಕ್ಕೆ ಬಾರಿ ದುರಂತ ತಪ್ಪಿದೆ.ಸ್ವಲ್ಪ ಏಮಾರಿದ್ರು ಓರ್ವ ಗರ್ಭಿಣಿ ಸಹಿತ 15ಕ್ಕೂ ಹೆಚ್ಚು ಜನರ ಜೀವಕ್ಕೆ ಕುತ್ತು ಬರ್ತಿತ್ತು.ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದಲ್ಲಿ ಮಳೆಯ ಆರ್ಭಟಕ್ಕೆ ರಸ್ತೆ ಸಂಪೂರ್ಣ ಮುಳುಗಿ ಬಿಟ್ಟಿತ್ತು.
ಸುಮಾರು 50 ಮೀಟರ್ ಉದ್ದ ರಸ್ತೆಯಲ್ಲಿ ರಾಜಕಾಲುವೆ ನೀರು ತುಂಬಿತ್ತು.15ಕ್ಕೂ ಅಧಿಕ ವಾಹನದಲ್ಲಿದ್ದ 50 ಹೆಚ್ಚು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ನಿಮಿಷ ನಿಮಿಷಕ್ಕೂ ನೀರನ ಮಟ್ಟದ ಏರಿಕೆಯಾಗಿ ಜನರಲ್ಲಿ ಆತಂಕ ಹೆಚ್ಚಾಗಿತ್ತು.ಅಗ್ನಿಶಾಮಕ ಸಿಬ್ಬಂದಿಗಳಿಂದ ತಕ್ಷಣವೇ ಕಾರ್ಯಾಚರಣೆ ನಡೆಸಿ ನೀರಿನಲ್ಲಿ ಸಿಲುಕಿದ್ದ 50ಕ್ಕೂ ಅಧಿಕ ಮಂದಿ ರಕ್ಷಣೆ ಮಾಡಿದ್ದಾರೆ.