Webdunia - Bharat's app for daily news and videos

Install App

ಸ್ಲೋ ಸಿಟಿಯನ್ನಾಗಿ ಮಾಡ್ತಿದೆ ಸ್ಮಾರ್ಟ್ ಸಿಟಿಯ ಕಾಮಗಾರಿ..!

Webdunia
ಶನಿವಾರ, 28 ಮೇ 2022 (20:42 IST)
ಸ್ಮಾರ್ಟ್ ಸಿಟಿ ಬೆಂಗಳೂರನ್ನ ಫುಲ್ ಸ್ಮಾರ್ಟ್ ಮಾಡ್ತೀವಿ.. ಸಿಲಿಕಾನ್ ಸಿಟಿಯ ಅಂದವನ್ನ ಹೆಚ್ಚಿಸ್ತೀವಿ ಅಂತ ಸ್ಮಾರ್ಟ್ ಸಿಟಿ ಓವರ್ ಆಗಿ ಬಿಲ್ಡಪ್ ಕೊಡ್ತಿತ್ತು. ಆದ್ರೆ, ಕಾಮಗಾರಿಯ ಅಸಲಿಯತ್ತು ಆಮೆಗತಿಯಲ್ಲಿ ಸಾಗ್ತಿದೆ. ಇದರ ವಿರುದ್ಧ ಜನ ಕೆಂಡಾಮಂಡಲಗೊಂಡಿದ್ದಾರೆ.ಬೆಂಗಳೂರಲ್ಲಿ ಓಡಾಡೋಕೆ ಒಂದು ರಸ್ತೆಯಿಲ್ಲ. ಪಾದಾಚಾರಿಗಳಿಗೆ ಫುಟ್ ಪಾತ್ ಇಲ್ಲ ಅನ್ನೋ ಕೂಗು ಈಗಲೂ ಇದೆ. ಕೇಂದ್ರ ಸರ್ಕಾರದ ಯೋಜನೆಯಡಿ ಸಿಲಿಕಾನ್ ಸಿಟಿಯನ್ನ ಸ್ಮಾರ್ಟ್ ಮಾಡೋಕೆ ಸ್ಮಾರ್ಟ್ ಸಿಟಿ ಮುಂದಾಗಿದೆ‌. ಆದ್ರೆ ವರ್ಷಗಳು ಉರುಳುತ್ತಿವೆ, ಕಾಮಗಾರಿ ಮಾತ್ರ ಮುಗಿಯುತ್ತಿಲ್ಲ ಅನ್ನೋ ಕೂಗು ಈಗ ಜೋರಾಗಿದೆ. ಹೌದು.. ಬೆಂಗಳೂರಿನ ಹಲವು ಭಾಗಗಳಲ್ಲಿ ಸ್ಮಾರ್ಟ್ ಸಿಟಿಯ ಕೆಲಸ ಕಾರ್ಯಗಳು ನಡೆಯುತ್ತಿವೆ. ಪಾದಾಚಾರಿ ರಸ್ತೆ,  ವೈಟ್ ಟ್ಯಾಪಿಂಗ್ ರೋಡ್ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನ ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿದೆ. ಆದ್ರೆ, ಕಳೆದ 1 ವರ್ಷದಿಂದಲೂ ಆಮೆ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ನಿತ್ಯ ಲಕ್ಷಾಂತರ ಜನ ಭೇಟಿ ನೀಡುವ ಪ್ರದೇಶಗಳಲ್ಲಿ ಒಂದೂವರೆ ವರ್ಷ‌ ಕಳೆದ್ರೂ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿ ಮುಗಿಸೋದಾಗಿ ನಾಲ್ಕೈದು ಬಾರಿ ಡೆಡ್ ಲೈನ್ ನೀಡಿ ಸ್ಮಾರ್ಟ್ ಸಿಟಿ ಸುಮ್ಮನಾಗಿದೆ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ಲಕ್ಷಾಂತರ ಜನ ಸಂಪರ್ಕ, ವಹಿವಾಟು ನಡೆಯೋ ಕೆ.ಆರ್ ಮಾರ್ಕೆಟ್ ಸ್ಥಿತಿ‌ ಅಧೋಗತಿಯಾಗಿದೆ‌. ಜನ ಜೀವ ಭಯದಲ್ಲಿರುವ ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇತ್ತ ಕೆ.ಆರ್ ಮಾರ್ಕೆಟ್ ವ್ಯಾಪಾರಿಗಳ ಗೋಳಂತೂ ಕೇಳೋದೇ ಬೇಡ. ಅರ್ಧಂಬರ್ಧ ಕಾಮಗಾರಿಗೆ ಬಿದ್ದು ಗಾಯ ಮಾಡಿಕೊಳ್ಲೋರ ಸಂಖ್ಯೆ ಹೆಚ್ಚಾಗ್ತಿದ್ಯಂತೆ. ಪುಟ್ ಪಾತ್ ಕಾಮಗಾರಿ ಬೇಗ ಕಂಪ್ಲೀಟ್ ಮಾಡಲು ಸ್ಮಾರ್ಟ್ ಸಿಟಿ ನಿರ್ಲಕ್ಷ್ಯ ವಹಿಸುತ್ತೆ ಅಂತ ಜನ ದೂಡುತ್ತಿದ್ದಾರೆ. ಅತ್ತ 2 ವರ್ಷಗಳಿಂದ ಕಬ್ಬನ್ ಪಾರ್ಕ್ ನ ಸುತ್ತಲೂ ಫುಟ್ ಪಾತ್ ಕಾಮಗಾರಿ ನಡೆಯುತ್ತಿದೆ‌. ಆದ್ರೆ, ಇನ್ನೂ ಪೂರ್ಣಗೊಂಡಿಲ್ಲ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡೋ ಈ ಕಬ್ಬನ್ ಪಾರ್ಕ್ ಗೆ ಸ್ಮಾರ್ಟ್ ಸಿಟಿ ಕೆಲಸ ಅಂದವನ್ನ ಹಾಳು ಮಾಡತ್ತಿದೆ. ಇದಷ್ಟೇ ಅಲ್ಲದೆ, ಸರ್ಕಾರಕ್ಕೆ ಆದಾಯ ತಂದುಕೊಡುವ ಅವೆನ್ಯೂ ರಸ್ತೆಯಲ್ಲೂ 1 ವರ್ಷ, 8 ತಿಂಗಳಿಂದ ನಿಧಾನಗತಿಯಲ್ಲೇ ಸ್ಮಾರ್ಟ್ ಸಿಟಿಯ ಕೆಲಸ ನಡೆಯುತ್ತಿದೆ. ಇಲ್ಲಿನ ವ್ಯಾಪಾರಿಗಳು ಹಾಗೂ ಗ್ರಾಹಕರ ಕಷ್ಟ ಹೇಳ ತೀರದಾಗಿದೆ. ಯಾಕೆ ಸರ್ ಇಷ್ಟು ಡಿಲೇ ಆಗ್ತಿದೆ ಅಂತ ಸ್ಮಾರ್ಟ್ ಸಿಟಿಯ ಎಂಡಿ ರಾಜೇಂದ್ರ ಜೋಳನ್ ಅವ್ರನ್ನ ಕೇಳಿದ್ರೆ, ಸ್ಮಾರ್ಟ್ ಸಿಟಿಯ ಕೆಲಸ ನಡೆಯುವ ಭಾಗಗಳ ಜನರೇ ವಿರೋಧ ಮಾಡ್ಯಿದ್ರು. ಹೀಗಾಗಿ ಸ್ವಲ್ಪ ತಡವಾಗ್ತಿದೆ. ಜೂನ್ ಅಥವಾ ಜುಲೈ ತಿಂಗಳೊಳಗೆ ಕಬ್ಬನ್ ಪಾರ್ಕ್, ಅವೆನ್ಯೂ ರಸ್ತೆ ಹಾಗೂ ಕೆ.ಆರ್.ಮಾರ್ಕೆಟ್ ನ ಸ್ಮಾರ್ಟ್ ಸಿಟಿ ಕೆಲಸ ಮುಗಿಸ್ತೀವಿ ಅಂತ ಹೇಳ್ತಿದ್ದಾರೆ.ಸ್ಮಾರ್ಟ್ ಸಿಟಿ ಹೆಸರಲ್ಲಿ ಬೆಂಗಳೂರಿನ ಹಲವು ರಸ್ತೆಗಳು ಅದ್ವಾನ ಆಗೋಗಿದೆ. ಅಂದವನ್ನ ಹೆಚ್ಚಿಸುತ್ತೇವೆ ಅಂತೇಳಿ, ರಸ್ತೆಗಳೆಲ್ಲಾ ಗಬ್ಬೆದ್ದು ಹೋಗಿವೆ. ಇನ್ನಾದ್ರೂ ಡೆಡ್ ಲೈನ್ ಗಳನ್ನ ಕೊಡುವ ಬದಲು, ಆದಷ್ಟು ಬೇಗ ಕಾಮಗಾರಿ ಮುಗಿಸಲಿ ಅಂತ ಜನರ ಹಿಡಿಶಾಪ ಹಾಕ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಮುಂದಿನ ಸುದ್ದಿ
Show comments