Select Your Language

Notifications

webdunia
webdunia
webdunia
webdunia

ಜೂನ್ 30 ರಿಂದ ರಾಜ್ಯದಲ್ಲಿ ಎಸ್ಐಆರ್ ಶುರು: ಈ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಳ್ಳಿ

Karnataka caste census
ಬೆಂಗಳೂರು: ಜೂನ್ 30 ರಿಂದ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಶುರುವಾಗಲಿದೆ.  ಅಧಿಕಾರಿಗಳು ಮನೆಗೆ ಬಂದು ದಾಖಲೆಗಳ ಪರಿಶೀಲನೆ ಮಾಡಲಿದ್ದು ಯಾವೆಲ್ಲಾ ದಾಖಲೆಗಳು ನಿಮ್ಮ ಬಳಿಯಿರಬೇಕು ಇಲ್ಲಿದೆ ವಿವರ.

ಅರ್ಹ ಮತದಾರರನ್ನು ಉಳಿಸಿಕೊಂಡು, ಅನರ್ಹರನ್ನು ಪಟ್ಟಿಯಿಂದ ಅಳಿಸಿ ಹಾಕಲು ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಚುನಾವಣಾಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು ನಿಮ್ಮ ಮನೆಗೇ ಬಂದು ದಾಖಲೆಗಳ ಪರಿಶೀಲನೆ ಮಾಡಲಿದ್ದಾರೆ. ಈ ವೇಳೆ ಅವರು ನೀಡುವ ಅರ್ಜಿ ಭರ್ತಿ ಮಾಡಿ ಸಹಿ ಮಾಡಿ ಕೊಡಬೇಕಾಗುತ್ತದೆ. ಕಡ್ಡಾಯವಾಗಿ ಅಧಿಕಾರಿಗಳಿಗೆ ನಿಮ್ಮ ವಿವರಗಳನ್ನು ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಯಾವೆಲ್ಲಾ ದಾಖಲೆಗಳು ನಿಮ್ಮ ಬಳಿಯಿರಬೇಕು ಇಲ್ಲಿದೆ ಪಟ್ಟಿ.

ಬೇಕಾಗುವ ದಾಖಲೆಗಳು
-ಕೇಂದ್ರ/ರಾಜ್ಯ ಸರ್ಕಾರ/ಪಿಎಸ್ ಯು ನಿಯಮಿತ ನೌಕರರು ಅಥವಾ ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿ ಆದೇಶ
-ಬ್ಯಾಂಕ್, ಸ್ಥಳೀಯ ಪ್ರಾಧಿಕಾರಗಳು, ಅಂಚೆ ಕಛೇರಿ ಮೊದಲಾದ ಸಾರ್ವಜನಿಕ ವಲಯದ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ ಅಥವಾ ಪ್ರಮಾಣ ಪತ್ರ.
-ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣ ಪತ್ರ
-ಪಾಸ್ ಪೋರ್ಟ್
-ಮಾನ್ಯತೆ ಪಡೆದ ಮಂಡಳಿಗಳು/ವಿಶ್ವ ವಿದ್ಯಾಲಯಗಳು ನೀಡಿರುವ ಎಸ್ಎಸ್ಎಸ್ ಎಲ್ ಸಿ/ಶೈಕ್ಷಣಿಕ ಪ್ರಮಾಣ ಪತ್ರ.
-ರಾಜ್ಯದ ಸಕ್ಷಮ ಪ್ರಾಧಿಕಾರಗಳಿಂದ ನೀಡಲಾದ ಖಾಯಂ ನಿವಾಸಿ ಪ್ರಮಾಣಪತ್ರ
-ಅರಣ್ಯ ಹಕ್ಕುಗಳ ಪ್ರಮಾಣ ಪತ್ರ
-ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಒಬಿಸಿ/ಎಸ್ ಸಿ/ ಎಸ್ ಟಿ ಅಥವಾ ಯಾವುದೇ ಜಾತಿ ಪ್ರಮಾಣ ಪತ್ರ
-ರಾಷ್ಟ್ರೀಯ ನಾಗರಿಕರ ನೋಂದಣಿ
-ರಾಜ್ಯ ಅಥವಾ ಸ್ಥಳೀಯ ಸರ್ಕಾರದ ಪ್ರಾಧಿಕಾರಗಳಿಂದ ನಿರ್ವಹಿಸಲಾಗಿರುವ ಕುಟುಂಬ ರಿಜಿಸ್ಟರ್
-ಸರ್ಕಾರದಿಂದ ನೀಡಲಾದ ಯಾವುದೇ ಭೂ/ಮನೆ ಹಂಚಿಕೆ ಪ್ರಮಾಣ ಪತ್ರ
-ಆಧಾರ್ ಸಂಬಂಧ, ಭಾರತ ಚುನಾವಣಾ ಆಯೋಗವು ಪತ್ರ ಸಂಖ್ಯೆ 23/2025-ಇಆರ್ ಎಸ್/ನಂ.II ರಲ್ಲಿ ಹೊರಡಿಸಿದ ಸೂಚನೆಗಳು ಅನ್ವಯಿಸುತ್ತದೆ.

ಈ ಎಲ್ಲಾ ದಾಖಲೆಗಳ ಪೈಕಿ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ, ಜನನ ಪ್ರಮಾಣ ಪತ್ರಗಳಿದ್ದರೂ ಸಾಕಾಗುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ನಿನ್ನ ಬಿಟ್ಟು ಹೋದ್ರೆ ಏನು ಮಾಡ್ತೀಯಾ.. ಅಮ್ಮನ ಪ್ರಶ್ನೆಗೆ ಪುಟ್ಟ ಮಗುವಿನ ಉತ್ತರ ಕೇಳಿದ್ರೆ ಕಣ್ಣಂಚು ಒದ್ದೆಯಾಗುತ್ತೆ Video