Publish Date: Mon, 29 Jun 2026 (11:06 IST)
Updated Date: Mon, 29 Jun 2026 (11:08 IST)
ಬೆಂಗಳೂರು: ಜೂನ್ 30 ರಿಂದ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಶುರುವಾಗಲಿದೆ. ಅಧಿಕಾರಿಗಳು ಮನೆಗೆ ಬಂದು ದಾಖಲೆಗಳ ಪರಿಶೀಲನೆ ಮಾಡಲಿದ್ದು ಯಾವೆಲ್ಲಾ ದಾಖಲೆಗಳು ನಿಮ್ಮ ಬಳಿಯಿರಬೇಕು ಇಲ್ಲಿದೆ ವಿವರ.
ದ
ಅರ್ಹ ಮತದಾರರನ್ನು ಉಳಿಸಿಕೊಂಡು, ಅನರ್ಹರನ್ನು ಪಟ್ಟಿಯಿಂದ ಅಳಿಸಿ ಹಾಕಲು ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಚುನಾವಣಾಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು ನಿಮ್ಮ ಮನೆಗೇ ಬಂದು ದಾಖಲೆಗಳ ಪರಿಶೀಲನೆ ಮಾಡಲಿದ್ದಾರೆ. ಈ ವೇಳೆ ಅವರು ನೀಡುವ ಅರ್ಜಿ ಭರ್ತಿ ಮಾಡಿ ಸಹಿ ಮಾಡಿ ಕೊಡಬೇಕಾಗುತ್ತದೆ. ಕಡ್ಡಾಯವಾಗಿ ಅಧಿಕಾರಿಗಳಿಗೆ ನಿಮ್ಮ ವಿವರಗಳನ್ನು ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಯಾವೆಲ್ಲಾ ದಾಖಲೆಗಳು ನಿಮ್ಮ ಬಳಿಯಿರಬೇಕು ಇಲ್ಲಿದೆ ಪಟ್ಟಿ.
ಬೇಕಾಗುವ ದಾಖಲೆಗಳು
-ಕೇಂದ್ರ/ರಾಜ್ಯ ಸರ್ಕಾರ/ಪಿಎಸ್ ಯು ನಿಯಮಿತ ನೌಕರರು ಅಥವಾ ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿ ಆದೇಶ
-ಬ್ಯಾಂಕ್, ಸ್ಥಳೀಯ ಪ್ರಾಧಿಕಾರಗಳು, ಅಂಚೆ ಕಛೇರಿ ಮೊದಲಾದ ಸಾರ್ವಜನಿಕ ವಲಯದ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ ಅಥವಾ ಪ್ರಮಾಣ ಪತ್ರ.
-ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣ ಪತ್ರ
-ಪಾಸ್ ಪೋರ್ಟ್
-ಮಾನ್ಯತೆ ಪಡೆದ ಮಂಡಳಿಗಳು/ವಿಶ್ವ ವಿದ್ಯಾಲಯಗಳು ನೀಡಿರುವ ಎಸ್ಎಸ್ಎಸ್ ಎಲ್ ಸಿ/ಶೈಕ್ಷಣಿಕ ಪ್ರಮಾಣ ಪತ್ರ.
-ರಾಜ್ಯದ ಸಕ್ಷಮ ಪ್ರಾಧಿಕಾರಗಳಿಂದ ನೀಡಲಾದ ಖಾಯಂ ನಿವಾಸಿ ಪ್ರಮಾಣಪತ್ರ
-ಅರಣ್ಯ ಹಕ್ಕುಗಳ ಪ್ರಮಾಣ ಪತ್ರ
-ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಒಬಿಸಿ/ಎಸ್ ಸಿ/ ಎಸ್ ಟಿ ಅಥವಾ ಯಾವುದೇ ಜಾತಿ ಪ್ರಮಾಣ ಪತ್ರ
-ರಾಷ್ಟ್ರೀಯ ನಾಗರಿಕರ ನೋಂದಣಿ
-ರಾಜ್ಯ ಅಥವಾ ಸ್ಥಳೀಯ ಸರ್ಕಾರದ ಪ್ರಾಧಿಕಾರಗಳಿಂದ ನಿರ್ವಹಿಸಲಾಗಿರುವ ಕುಟುಂಬ ರಿಜಿಸ್ಟರ್
-ಸರ್ಕಾರದಿಂದ ನೀಡಲಾದ ಯಾವುದೇ ಭೂ/ಮನೆ ಹಂಚಿಕೆ ಪ್ರಮಾಣ ಪತ್ರ
-ಆಧಾರ್ ಸಂಬಂಧ, ಭಾರತ ಚುನಾವಣಾ ಆಯೋಗವು ಪತ್ರ ಸಂಖ್ಯೆ 23/2025-ಇಆರ್ ಎಸ್/ನಂ.II ರಲ್ಲಿ ಹೊರಡಿಸಿದ ಸೂಚನೆಗಳು ಅನ್ವಯಿಸುತ್ತದೆ.
ಈ ಎಲ್ಲಾ ದಾಖಲೆಗಳ ಪೈಕಿ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ, ಜನನ ಪ್ರಮಾಣ ಪತ್ರಗಳಿದ್ದರೂ ಸಾಕಾಗುತ್ತವೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ