Webdunia - Bharat's app for daily news and videos

Install App

ರಾಷ್ಟ್ರಮಟ್ಟದ ಶೂಟಿಂಗನಲ್ಲಿ ರಾಜ್ಯದ ಪ್ರತಿಭೆಗೆ ಬೆಳ್ಳಿ ಪದಕ

Webdunia
ಶುಕ್ರವಾರ, 7 ಡಿಸೆಂಬರ್ 2018 (19:56 IST)
ಕೇರಳದ ತಿರುವಂತಪುರದಲ್ಲಿ ನಡೆದ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಕ್ರೀಡಾಪಟುಗಳು ಬೆಳ್ಳಿ ಪದಕ ಜಯಿಸಿದ್ದಾರೆ.

ಕೇರಳದ ತಿರುವಂತಪುರದಲ್ಲಿ  ನ.11 ರಿಂದ ಡಿ.7 ರವರೆಗೆ ನಡೆದ 62 ನೇ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಹರ್ಷಾ ಮತ್ತು ಜ್ಯೋತಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ ಎಂದು ರವಿಚಂದ್ರ ಬಾಲೇಹೊಸೂರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೂರು ಬೆಳ್ಳಿ, 5 ಶೂಟರ್ಸ್ ಇಂಡಿಯನ್ ಟೀಮ್ ಟ್ರಾಯಲ್ಸ್ ಗೆ ಕ್ವಾಲಿಫೈಯರ್ ಆಗಿದ್ದಾರೆ. ಅದರಲ್ಲಿ  ಏರ್ ರೈಫಲ್ ಪ್ಯಾರಾ ವಿಭಾಗದ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಹರ್ಷಾ ದೇವರಡ್ಡಿ, ಜ್ಯೋತಿ ಸಣ್ಣಕ್ಕಿ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇದರಿಂದ 63 ನೇ ನ್ಯಾಶನಲ್ ಶೂಟಿಂಗ್ ಚಾಂಪಿಯನ್ ಶಿಪ್ ಗೆ ಕುಶಾಲ ರಾಮಣ್ಣವರ, ಪ್ರಭು ಬೈರವಾಡಗಿ, ನೀಲ್ ಶ್ಯಾಡಗುಪ್ಪಿ, ನಾರಾಯಣ ತಾತುಸ್ಕರ, ಪ್ರಥಮ ನಾಯಕ ಆಯ್ಕೆಯಾಗಿದ್ದಾರೆ. ಮುಂದೆ ಹರ್ಷಾ ದೇವರಡ್ಡಿ ಏರ್ ರೈಫಲ್ ಸ್ಟಾಂಡಿಂಗ್ ನಲ್ಲಿ‌ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಲೇವಲ್ -3 ಗೆ ಆಯ್ಕೆಯಾಗಿದ್ದಾರೆ.  ಅಕಾಡೆಮಿಯ ಸಹಜಾ ಜಯಕುಮಾರ, ಅಕ್ಷತಾ ಹರಕುಣಿ , ಮಹಮ್ಮದ್ ಜಿಶಾನ್ ಬುಡನಖಾನ ಶಿಶಿರ ಎಂ. ಅನಮೊಲ ತೋಟದ ಏರ್ ರೈಫಲ್ ವಿಭಾಗದಲ್ಲಿ ಮಹಿಳೆ, ಪುರುಷ ವಿಭಾಗದಲ್ಲಿ ಇಂಡಿಯನ್ ಟೀಮ್ ಟ್ರಾಯಲ್ಸ್ ಗೆ ಆಯ್ಕೆ ಆಗಿ ಧಾರವಾಡ ಜಿಲ್ಲೆಗೆ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮರೆಸಿದ್ದಾರೆ ಎಂದು ಹೇಳಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಸಿಂಹದ ಹಾಗೇ ನಾಯಿಗಳನ್ನು ಸಾಕಿಕೊಂಡಿರುವ ಶ್ವಾನಪ್ರೇಮಿ ಸತೀಶ್‌ಗೆ ಇಡಿ ಶಾಕ್‌, ತನಿಖೆಯಲ್ಲಿ ಗೊತ್ತಾಯ್ತು ಅಸಲಿಯತ್ತು

ಮುಂದಿನ ಸುದ್ದಿ
Show comments