Webdunia - Bharat's app for daily news and videos

Install App

ಯುಗಾದಿಯನ್ನ ಹಬ್ಬವನ್ನು ಖುಷಿಯಿಂದ ಬರಮಾಡಿಕೊಂಡ ಸಿಲಿಕಾನ್ ಜನ…!

Webdunia
ಬುಧವಾರ, 22 ಮಾರ್ಚ್ 2023 (16:06 IST)
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಈ ಸಾಲುಗಳೆ ಹೇಳುವ ರೀತಿ ನಮ್ಮ ಐಟಿ ಸಿಟಿ ಜನರು ಯುಗಾದಿ ಹಬ್ಬವನ್ನು ಭರ್ಜರಿಯಾಗಿ ಬರ ಮಾಡಿಕೊಂಡರು. ಇನ್ನು ದೇವಸ್ಥಾನಗಳಲ್ಲಿ ಯಾವ ರೀತಿಯಲ್ಲಿ ಹೊಸ ವರ್ಷದ ಹಬ್ಬನ ಬರ ಮಾಡಿಕೊಂಡರು.ವರ್ಷದ ಮೊದಲ ಹಬ್ಬ ಯುಗಾದಿಯನ್ನ ಸಿಲಿಕಾನ್ ಜನರು ಖುಷಿಯಿಂದ ಬರ ಮಾಡಿಕೊಂಡ್ರು. ಇನ್ನು ದೇವಸ್ಥಾನಗಳಲ್ಲಿ  ಧಾರ್ಮಿಕ ಹಬ್ಬವನ್ನಾಗಿ ಆಚಾರಿಸಲು, ಮುಜುರಾಯಿ ಇಲಾಖೆ ಸುತ್ತೋಲೆ ನೀಡಿದ್ದರಿಂದ ಇಂದು ವಿಜೃಂಭಣೆಯಿಂದ ಹಬ್ಬವನ್ನ ಆಚಾರಿಸಿದ್ರು.

ಬೆಳ್ಳಗ್ಗೆ 6 ಗಂಟೆಯಿಂದ ನಗರದ ಕಾಡು ಮಲ್ಲೇಶ್ವರಂ, ಗವಿಗಂಗಾಧರೇಶ್ವರ, ಗಂಗಮ್ಮ ದೇವಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ - ಪೂಜೆ ಅರ್ಜನೆ ಮಾಡಿ, 9 ಗಂಟೆಗೆ ಪಂಚಾಭಿಷೇಕ ಮಹಾಮಂಗಾಳಾರತಿ ಮಾಡಿ ದೇವರ ದರ್ಶನಕ್ಕೆ ಅವಾಕಾಶ ಕಲ್ಪಿಸಲಾಗಿತ್ತು. ಇನ್ನು ದೇವಸ್ಥಾನಕ್ಕೆ ಬಂದಂತಹ ಭಕ್ತರಿಗೆ ಬೇವು - ಬೆಲ್ಲ ನೀಡಿ ಪ್ರಸಾಧ ವಿತರಣೆಯನ್ನ ಮಾಡಲಾಯಿತು. ಇನ್ನು ದೇವರ ದರ್ಶನಕ್ಕೆ ರಾತ್ರಿ 9 ಗಂಟೆಯವರೆಗೂ ಅವಾಕಾಶ ಕಲ್ಪಿಸಲಾಗಿತ್ತು ಇನ್ನೂ ಗಂಗಮ್ಮ ದೇವಿ ದೇವಾಲಾಯದಲ್ಲಿ ದೇವಿಗೆ ದಕ್ಷಿಣ ಕನ್ನಡ ಜಿಲ್ಲೆಯ ಆರಾಧ್ಯ ದೈವ ಪಂಜುರ್ಲಿ ಯ ಅಲಂಕಾರ ಮಾಡಲಾಗಿತ್ತು ಇದು ಭಕ್ತರ ಮೈ ಮನ ವನ್ನು ರೋಮಾಂಚನಗೊಳಿಸಿತು. 

ದೇವಾಲಯಗಳ ಮುಂಭಾಗವನ್ನು ತೆಂಗಿನ ಗರಿಗಳಿಂದ ಚಪ್ಪರ, ತಳಿರು ತೋರಣ, ಹೂವಿನ ಅಲಂಕಾರ ಮುಂತಾದವುಗಳಿಂದ ಅಲಂಕರಿಸಲಾಗಿದ್ದು, ಯುಗಾದಿ ಹಬ್ಬದ  ದಿನ ಇಂದು ಬೆಳಿಗ್ಗೆ ದೇವರಿಗೆ ವಿಶೇಷವಾಗಿ ಸಂಕಲ್ಪಿಸಿ, ಪ್ರಾರ್ಥಿಸಿ ದೇವರಿಗೆ ವಿಶೇಷವಾಗಿ ಅಭಿಷೇಕ, ಅಲಂಕಾರ, ಪೂಜೆಯೊಂದಿಗೆ  ವಿಜೃಭಂನೆಯಿಂದ ಆಚರಿಸಲಾಯಿತು, ಇನ್ನು ಭಕ್ತರು ಕೂಡ ಹೊಸ ವರುಷದಂದು ದೇವಾಲಯಕ್ಕೆ ಬಂದು ತಮ್ಮ ಕಷ್ಟ ಕಾರ್ಪಣ್ಯವನ್ನು ದೂರ ಮಾಡಿಕೊಳ್ಳುವಂತೆ ಬೇಡಿಕೊಂಡರು,

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್, ಇರಾನ್ ಯುದ್ಧ ಆದ್ರೆ ಟೆನ್ಷನ್ ಪಾಕಿಸ್ತಾನಕ್ಕೆ: ಯಾಕೆ ಗೊತ್ತಾ

ಅಹಮದಾಬಾದ್ ವಿಮಾನ ಪತನ: ಸಾವಿನ ಸಂಖ್ಯೆ 274 ಕ್ಕೆ ಏರಿಕೆ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

Karnataka Weather: ಜೂನ್ 16 ರವರೆಗೂ ಈ ಜಿಲ್ಲೆಗಳ ಹವಾಮಾನ ತಪ್ಪದೇ ಗಮನಿಸಿ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಮುಂದಿನ ಸುದ್ದಿ
Show comments