ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನಿಯ ಏರಿಕೆ

Webdunia
ಬುಧವಾರ, 9 ಆಗಸ್ಟ್ 2023 (21:00 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ದಿನ ನೆಮ್ಮದಿಯಾಗಿ ಹೊರಗಡೆ ಒಡಾಡಿಕೊಂಡು ಬರಬೇಕು ಅಂದ್ರೆ ನಿಮಗೆಲ್ಲ ಗೊತ್ತಿರೋ ಹಾಗೆ ಅದು ಅಸಾಧ್ಯದ ಮಾತು. ಮನೆಯಿಂದ ಹೊರಗೆ ಕಾಲಿಟ್ರೆ ಸಾಕು ಟ್ರಾಫಿಕ್ ಕಿರಿಕಿರಿ ಜನಜಂಗುಳಿ, ದಿನನಿತ್ಯ ವಾಹನ ಸವರರ ಪರದಾಟ. ಖಾಸಗಿ ವಾಹನಗಳಲ್ಲಿ ಹೊಗಬೇಕು ಅಂದ್ರೆ ಹೆಚ್ಚಿನ ಹಣ ವಸುಲಿ ಮಾದ್ತಾರೆ. ಇನ್ನು ಸರ್ಕಾರಿ ಬಸ್ ಗಳಂತು ಕೆಳಗೆಇಲ್ಲ ಇದರ ಮಧ್ಯೆ ಆಫೀಸಿಗೆ ಹೊಗೊರು ಸಿಕ್ಕಾಕೊಂಡ್ರೆ ಅವರ ಪರಸ್ಥಿತಿ ನೋಡೋಕಾಗೋಲ್ಲ. ಇನ್ನೂ ಗಾಡಿ ಪಕ್ಕಕ್ಕೆಹಾಕಿ ನಿಲ್ಲೋಣ ಅಂದ್ರೆ  ನೂರಾರು ರೂಲ್ಸ್ ಗಳು ಹೇಳಿ ಪೊಲೀಸರು ಫೈನ್ ಹಾಕ್ತಾರೆ. ಹೀಗಾಗಿನೆ ಜನ ಇದೆಲ್ಲದರ ಜಂಜಾಟವೆ ಬೇಡವೆ ಬೇಡ ಎಂದು ನಮ್ಮ ಮೆಟ್ರೋ ಕಡೆ ಮುಖ ಮಾಡುತ್ತಿದ್ದಾರೆ. 
 
ಇನ್ನೂ ಕಳೆದ ನಾಲ್ಕು ತಿಂಗಳಿನಲ್ಲಿ ನಮ್ಮ ಮೆಟ್ರೊದ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು. ಜುಲೈ ತಿಂಗಳಿನಲ್ಲಿ ದೈನಂದಿನ ಸರಾಸರಿ 6.11 ಲಕ್ಷ ಮಂದಿ ನಮ್ಮ ಮೆಟ್ರೊದಲ್ಲಿ ಸಂಚರಿಸಿದ್ದಾರೆ. ಜುಲೈನಲ್ಲಿ 17 ದಿನ ಸರಾಸರಿ 6.2 ಲಕ್ಷ ಪ್ರಯಾಣಿಕರು ಮೆಟ್ರೊ ಬಳಕೆ ಮಾಡಿದ್ದು, ಈ ವರ್ಷದ ಜನವರಿಗೆ ಹೋಲಿಕೆ ಮಾಡಿದರೆ ಇದು ಶೇ 16 ರಷ್ಟು ಅಧಿಕವಾಗಿದೆ. ಏಪ್ರಿಲ್‌ನಿಂದ ಜುಲೈ ತಿಂಗಳವರೆಗೆ ಒಟ್ಟು ನಾಲ್ಕು ತಿಂಗಳು, ಪ್ರಯಾಣಿಕರ ಸಂಖ್ಯೆ ಈ ಹಿಂದಿನ ತಿಂಗಳಿಗಿಂತ ಹೆಚ್ಚಳವಾಗಿದ್ದು, ಜನರೊಂದಿಗೆ ಕೋಟಿ ಕೋಟಿ ಆದಾಯ ಕೂಡ ಹರಿದು ಬರುತ್ತಿದೆ.  ಇನ್ನೂ ಆಗಸ್ಟ್ ಮಾಸಾಂತ್ಯದಲ್ಲಿ ಕೆ.ಆರ್ ಪುರ ಇಂದ ಬೈಯಪ್ಪನಹಳ್ಳಿಗೆ  2.1 ಕಿ.ಮಿ ಹಾಗೂ ಕೆಂಗೇರಿ ಇಂದ ಚಲ್ಲಘಟ್ಟದವರೆಗೆ 1.9 ಕಿ.ಮಿ ಮಾರ್ಗದ ಕಾಮಗಾರಿ ಮುಕ್ತವಾಗಲಿದ್ದು, ಮುಂದಿನ ದಿನನಗಳಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 7.5 ಲಕ್ಷಕ್ಕೆ ಏರಿಕೆಯಾಗುವ ವಿಶ್ವಾಸ ಇದೆ ಎಂದು ಬಿಎಂಆರ್‌ಸಿಎಲ್‌ ಹೇಳಿಕೊಂಡಿದೆ.ಅದೇನೆ ಇರಲಿ ನಮ್ಮ ಮೆಟ್ರೋ ದತ್ತ ಜನ ಮುಖ ಮಾಡುತ್ತಿರುವುದು ಮೆಟ್ರೋಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪತ್ನಿ ಚೆನ್ನಮ್ಮ ನಿಧನ: ಡಿ ದೇವೇಗೌಡ ಜತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ಮೃತರ ಕುಟುಂಬಕ್ಕೆ ಮೋದಿ ಪರಿಹಾರ ಘೋಷಣೆ

ಟಿಎಂಸಿ ಬಿಟ್ಟು ಹೋದವರು ಮತ್ತೇ ವಾಪಾಸ್ ಬಂದ್ರೆ ನಾನು ರಾಜೀನಾಮೆ ಕೊಡ್ತೇನೆ: ಅಭಿಷೇಕ್ ಬ್ಯಾನರ್ಜಿ

ಚೆನ್ನಮ್ಮರ ಮೇಲೆ ದೇವೇಗೌಡರ ಕುಟುಂಬದ ಸದಸ್ಯನಿಂದಲೇ ನಡೆದಿದ್ದು ಆ್ಯಸಿಡ್ ದಾಳಿ, ಎಲ್ಲಿ, ಯಾವಾಗ ಗೊತ್ತಾ

ಬಂಡಾಯ ಟಿಎಂಸಿ, ಯುಬಿಟಿ ಸೇನಾ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇಂದು ನಿರ್ಧಾರ ಸಾಧ್ಯತೆ

ಮುಂದಿನ ಸುದ್ದಿ
Show comments