Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಕೂಡ ಒಂದು ದಿನ ಜೈಲಿಗೆ ಹೋಗ್ತಾನೆ ಎಂದ ಮಾಜಿ ಸಚಿವ

ಸಿದ್ದರಾಮಯ್ಯ ಕೂಡ ಒಂದು ದಿನ ಜೈಲಿಗೆ ಹೋಗ್ತಾನೆ ಎಂದ ಮಾಜಿ ಸಚಿವ
ತುಮಕೂರು , ಶನಿವಾರ, 19 ಅಕ್ಟೋಬರ್ 2019 (12:39 IST)
ತುಮಕೂರು : ಅಕ್ರಮ ಹಣ ಸಂಗ್ರಹಿಸಿ ಎಲ್ಲರೂ ಉಗ್ರಗಾಮಿಗಳಾಗಿ ಜೈಲಿಗೆ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಒಂದು ದಿನ ಜೈಲಿಗೆ ಹೋಗ್ತಾನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.




ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನಿ ಟೆರರಿಸ್ಟ್, ಜಾತಿ ಟೆರರಿಸ್ಟ್  ಸಿದ್ದರಾಮಯ್ಯ ಯಾವುದೇ ಕೇಸ್ ನಲ್ಲಿ ಸಿಕ್ಕಿಹಾಕಿಕೊಳ್ಳಲಿಲ್ಲ. ಮುಂದೊಂದು ದಿನ ಯಾವುದಾದರೂ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಈ ಬಗ್ಗೆ ಅವರ ಹೇಳಿಕೆಗಳೇ ಮುನ್ಸೂಚನೆ ನೀಡುತ್ತಿದೆ ಎಂದು ಹೇಳಿದ್ದಾರೆ.


ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸಲು ಹೊರಟಿದ್ದಾರೆ. ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆಯವರಂತಹ ಹಿರಿಯ ನಾಯಕರು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ. ಸಿದ್ದರಾಮಯ್ಯನವರ ದುರಂಕಾರ ಮಿತಿಮೀರಿದೆ, ಹೀಗಾಗಿ ಅವರ ಆಪ್ತರೇ ಪಕ್ಷ ಬಿಟ್ಟು ಬಂದರು. ದೀಪ ಆರುವಾಗ ಜೋರಾಗಿ ಉರಿಯುತ್ತದೆ. ಸಿದ್ದರಾಮಯ್ಯ ಪರಿಸ್ಥಿತಿಯು ಹಾಗೇ ಆಗಿದೆ ಎಂದು ಕಿಡಿಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ; ಪೌಡರ್ ಡಬ್ಬಗಳನ್ನು ಹಿಂಪಡೆದ ಕಂಪೆನಿ