Select Your Language

Notifications

webdunia
webdunia
webdunia
webdunia

ಗಣಿ ನಾಡಿನಲ್ಲಿ ಇಂದು ಸಿದ್ದರಾಮಯ್ಯ-ಬಿ ಶ್ರೀರಾಮುಲು ನಡುವೆ ಫೈಟ್

ಗಣಿ ನಾಡಿನಲ್ಲಿ ಇಂದು ಸಿದ್ದರಾಮಯ್ಯ-ಬಿ ಶ್ರೀರಾಮುಲು ನಡುವೆ ಫೈಟ್
ಬೆಂಗಳೂರು , ಸೋಮವಾರ, 22 ಅಕ್ಟೋಬರ್ 2018 (09:37 IST)
ಬೆಂಗಳೂರು: ನವಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಗೆ ಇಂದು ಗಣಿ ನಾಡು ಬಳ್ಳಾರಿಯಲ್ಲಿ ಸಿದ್ದರಾಮಯ್ಯ ಮತ್ತು ಬಿ ಶ್ರೀರಾಮುಲು ನಡುವೆ ಭರ್ಜರಿ ಪ್ರಚಾರದ ಫೈಟ್ ನಡೆಯಲಿದೆ.

ಬಿಜೆಪಿ ಅಭ್ಯರ್ಥಿ ಜೆ ಶಾಂತಾ ಪರ ಶಾಸಕ ಬಿ ಶ್ರೀರಾಮುಲು ಇಂದು ಮತ ಯಾಚನೆ ನಡೆಸಲಿದ್ದಾರೆ. ಇನ್ನೊಂದೆಡೆ ಮತ್ತೆ ಬಳ್ಳಾರಿಗೆ ಕಾಲಿಟ್ಟಿರುವ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಮತ ಯಾಚನೆ ಮಾಡಲಿದ್ದಾರೆ.

ಸಿದ್ದರಾಮಯ್ಯಗೆ ರಾಜಕೀಯವಾಗಿ ಮರು ಜೀವ ಕೊಟ್ಟ ನಾಡು ಗಣಿ ನಾಡು. ಇಲ್ಲಿಂದಲೇ ಸಿದ್ದರಾಮಯ್ಯ ಗಣಿ ದಣಿಗಳ ವಿರುದ್ಧ ಸಿಡಿದೆದ್ದು ಪಾದ ಯಾತ್ರೆ ನಡೆಸಿ ಕೊನೆಗೆ ಮುಖ್ಯಮಂತ್ರಿಯ ಗದ್ದುಗೆಗೆ ಏರಲು ಕಾರಣವಾಗಿತ್ತು. ಇದೀಗ ಮತ್ತೆ ಬಳ್ಳಾರಿಯಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಅಂತ್ಯಕ್ರಿಯೆಗೆ ತಮಿಳುನಾಡು ಸರ್ಕಾರ ಖರ್ಚು ಮಾಡಿದ ಮೊತ್ತವೆಷ್ಟು ಗೊತ್ತೇ?!