Select Your Language

Notifications

webdunia
webdunia
webdunia
webdunia

ತಿಂಗಳೊಳಗೆ ಎಂಪಿ ಸೀಟು ಫೈನಲ್ ಎಂದ ಸಿದ್ದರಾಮಯ್ಯ!

ತಿಂಗಳೊಳಗೆ ಎಂಪಿ ಸೀಟು ಫೈನಲ್ ಎಂದ ಸಿದ್ದರಾಮಯ್ಯ!
ಹುಬ್ಬಳ್ಳಿ , ಶುಕ್ರವಾರ, 4 ಜನವರಿ 2019 (15:54 IST)
ಜನವರಿ ಅಂತ್ಯದೊಳಗೆ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಹಾಗೂ ಜೆಡಿಎಸ್ ಜತೆಗಿನ ಸೀಟು ಹಂಚಿಕೆ ಅಂತಿಮ ತೀರ್ಮಾನ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಈ ತಿಂಗಳೊಳಗೆ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಇನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ಕೈ ಮೇಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ವಯುಕ್ತಿಕ ವರ್ಚಸ್ಸು ಇಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನದಂತೆ ನಡೆಯುತ್ತೆ.  ನಾವು ಸಲಹೆ ಸೂಚನೆ ಮಾತ್ರ ನೀಡುತ್ತೇವೆ. ಅಂತಿಮವಾಗಿ ಹೈಕಮಾಂಡ  ನಿರ್ಧಾರ ತೆಗೆದುಕೊಳ್ಳುತ್ತೆ‌ ಎಂದಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಆಸ್ಪತ್ರೆಗೆ ಸಿಎಂ ಭೇಟಿ