Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯರದ್ದು ರಾಕ್ಷಸ ಮುಖ- ಅನಂತಕುಮಾರ ಹೆಗಡೆ

ಸಿದ್ದರಾಮಯ್ಯರದ್ದು ರಾಕ್ಷಸ ಮುಖ- ಅನಂತಕುಮಾರ ಹೆಗಡೆ
ಬೆಳಗಾವಿ , ಮಂಗಳವಾರ, 12 ಡಿಸೆಂಬರ್ 2017 (12:14 IST)
ಹೊನ್ನಾವರದಲ್ಲಿನ ಗಲಭೆ ಮತ್ತು ಪರೇಶ್ ಮೆಸ್ತಾ ಹತ್ಯೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍‍ನವರದ್ದು ರಾಕ್ಷಸ ಮುಖ ಎಂದು ಆರೋಪಿಸಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ. ಅವರದ್ದು ರಾಕ್ಷಸ ಮುಖವೋ ಮನುಷ್ಯರ ಮುಖವೋ ಗೊತ್ತಾಗುತ್ತದೆ ಎಂದು ವ್ಯಂಗವಾಡಿದ್ದಾರೆ.
 
ಪರೇಶ್ ಮೆಸ್ತಾ ಅವರನ್ನು ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ. ಈ ಸಾವು ಮಾನವೀಯತೆಯ ಕಗ್ಗೊಲೆ. ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದ್ದು, ನ್ಯಾಯಯುತ ತನಿಖೆ ಮಾಡುವ ಮನಸ್ಸು ಕಾಂಗ್ರೆಸ್ ಸರಕಾರಕ್ಕಿಲ್ಲ ಎಂದು ದೂರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪರಿವರ್ತನಾ ಯಾತ್ರೆ ಮಾಡುವ ಮುನ್ನ ಬಿಜೆಪಿಯವರು ಬದಲಾಗಲಿ- ಸಚಿವ