ತಿರುಪತಿಯಲ್ಲಿ ಹಿಂದೂಯೇತರ ಚಿಹ್ನೆ: ಜಗನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಶೋಭಾ ಕರಂದ್ಲಾಜೆ

Krishnaveni K
ಶುಕ್ರವಾರ, 20 ಸೆಪ್ಟಂಬರ್ 2024 (14:14 IST)
ತಿರುಪತಿ: ತಿಮ್ಮಪ್ಪನ ಲಡ್ಡಿಗೆ ಪ್ರಾಣಿಗಳ ಕೊಬ್ಬಿನ ಬಳಕೆ ಮಾಡಿದ್ದರು ಎಂಬ ಆರೋಪಗಳ ಬೆನ್ನಲ್ಲೇ ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತೊಂದು ಆರೋಪ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶೋಭಾ, ಹಿಂದಿನ ಸರ್ಕಾರದ ಸಿಎಂ ಆಗಿದ್ದ ಜಗನ್ ತಿರುಪತಿಯ ಕಾಲೇಜುಗಳಲ್ಲಿ ತಿಮ್ಮಪ್ಪನ ಫೋಟೋ ಕಿತ್ತು ಹಾಕಿದ ಹಿಂದೂಯೇತರ ಚಿಹ್ನೆ ಬಳಸಲು ತಾಕೀತು ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಿದ ಆರೋಪಕ್ಕೆ ಸಿಲುಕಿರುವ ಮಾಜಿ ಸಿಎಂ ಜಗನ್ ವಿರುದ್ಧ ಈಗ ಮತ್ತೊಂದು ಗಂಭೀರ ಆರೋಪ ಎದುರಾಗಿದೆ.

ಜಗನ್ ಸರ್ಕಾರವಿದ್ದಾಗ ತಿರುಪತಿಯ ಕಾಲೇಜುಗಳಲ್ಲಿ ವೆಂಕಟೇಶನ ಫೋಟೋಗಳನ್ನು ಕಿತ್ತು ಹಾಕಲು ಬಲವಂತ ಮಾಡಲಾಗಿತ್ತು. ತಿರುಪತಿ ಬೆಟ್ಟದಲ್ಲಿ ಹಿಂದೂಯೇತರ ದೇವರ ಚಿಹ್ನೆಯನ್ನು ಬಳಸಲು ಜಗನ್ ಸರ್ಕಾರ ಒತ್ತಡ ಹಾಕಿತ್ತು. ಟಿಟಿಡಿ ಬೋರ್ಡ್ ನಲ್ಲಿ ಹಿಂದೂಯೇತರರನ್ನು ನೇಮಿಸಲಾಗಿತ್ತು. ಲಡ್ಡು ಪ್ರಸಾದಕ್ಕೂ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿತ್ತು. ಈ ಹಿಂದೂ ವಿರೋಧಿ ರಾಜಕೀಯಕ್ಕೆ ಕ್ಷಮಿಸಿ ಬಿಡು ವೆಂಕಟೇಶ ದೇವರೇ ಎಂದು ಶೋಭಾ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು, ಈ ಮಹಾಪರಾಧಕ್ಕೆ ಕೇವಲ ಒಂದು ‘ಸಾರಿ’ ಕೇಳಿದ್ರೆ ಆಗೋಯ್ತಾ ಮೇಡಂ? ನಿಮ್ಮ ಮೋದಿ ಸರ್ಕಾರ ಇಂತಹ ಅಪರಾಧದ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಕೇಳಿದ್ದಾರೆ. ಇನ್ನು, ಕೆಲವರು ಇಷ್ಟೆಲ್ಲಾ ಮೊದಲೇ ಗೊತ್ತಿದ್ದರೂ ಯಾಕೆ ನೀವು ಈ ಮೊದಲು ಸುಮ್ಮನಿದ್ದಿರಿ ಎಂದು ಕೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ನಾಚಿಕೆಯಿಲ್ಲದೇ ಸುಳ್ಳು ಹೇಳುವ ಪ್ರಲ್ಹಾದ್ ಜೋಶಿಗೆ ಮಾನ ಮರ್ಯಾದೆ ಇದ್ಯಾ: ಸಿದ್ದರಾಮಯ್ಯ ಗರಂ

ಇಂದಿರಾ ಕಿಟ್ ಫಲಾನುಭವಿಗಳು ತಪ್ಪದೇ ಗಮನಿಸಿ: ಇನ್ಮುಂದೆ ಈ ಬದಲಾವಣೆ ಖಚಿತ

ರೈತರ ಪ್ರತಿಭಟನೆಗೆ ಕೇಂದ್ರವನ್ನು ದೂರಿದ ಸಿದ್ದರಾಮಯ್ಯ: ಕಳ್ಳನಿಗೊಂದು ಪಿಳ್ಳೆ ನೆವ ಎಂದ ಪಬ್ಲಿಕ್

ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ಕೊಟ್ಟ ಕಬ್ಬು ಬೆಳೆಗಾರರು: ಇದೇ ಕೊನೇ ಡೆಡ್ ಲೈನ್

ಮುಂದಿನ ಸುದ್ದಿ
Show comments