Publish Date: Sun, 28 Jan 2018 (20:57 IST)
Updated Date: Sun, 28 Jan 2018 (20:58 IST)
ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಮಠಕ್ಕೆ ಮರಳಿದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಠ ಹಿಡಿದು ಭಕ್ತರಿಗೆ ದರ್ಶನ ನೀಡಿದ್ದಾರೆ.
ಶನಿವಾರವಷ್ಟೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮಠಕ್ಕೆ ಮರಳಿರುವ ಸ್ವಾಮೀಜಿ ಭಾನುವಾರ ಭಕ್ತರಿಗೆ ದರ್ಶನ ನೀಡಲೇಬೇಕು ಎಂದು ಹಠ ಹಿಡಿದು ಭಕ್ತರಿಗೆ ದರ್ಶನ ನೀಡಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ಮಠದ ಸ್ವಾಮೀಜಿಯವರು ಹಾಗೂ ವೈದ್ಯರು ಶಿವಕುಮಾರ ಸ್ವಾಮೀಜಿ ಅವರಿಗೆ ವಿಶ್ರಾಂತಿಯ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿದರೂ, ತಾವು ಭಕ್ತರಿಗೆ ದರ್ಶನ ನೀಡಲೇಬೇಕು ಎಂದು ಹಠ ಹಿಡಿದು ಪೇಟ ಸುತ್ತಿಕೊಳ್ಳಲು ಮುಂದಾದಾಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.