ಕೆಪಿಎಸ್ಸಿ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ "ಊರಿಗೆ ಬಂದವರು ನೀರಿಗೆ ಬರದೇ ಇರುತ್ತಾರೆಯೇ" ಎಂದು ಹೇಳಿದ್ದಾರೆ.
ಕೆಪಿಎಸ್ಸಿ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರಗಳು ಹಿಂದಿನಿಂದಲೂ ನಡೆಯುತ್ತಿವೆ ಎನ್ನುವ ಆರೋಪಗಳ ಕೇಳಿಬರುತ್ತಿವೆ. ಇದೀಗ ಕೆಪಿಎಸ್ಸಿ ಅಧ್ಯಕ್ಷರ ಬದಲಾವಣೆ ಸರಕಾರಕ್ಕೆ ನೆಮ್ಮದಿ ತರುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕೆಪಿಎಸ್ಸಿ ಅಧ್ಯಕ್ಷರ ನೇಮಕಾತಿ ಶಿಫಾರಸ್ಸು ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ಯಾಂಭಟ್ ಅವರ ಹೆಸರನ್ನು ಶಿಫಾರಸ್ಸು ಮಾಡಿಲ್ಲ, ಅವರ ಹೆಸರನ್ನು ಶಿಫಾರಸ್ಸು ಮಾಡಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಬಿಡಿಎ ಆಯುಕ್ತ ಶ್ಯಾಂಭಟ್ ಅವರ ಹೆಸರು ಶಿಫಾರಸ್ಸು ಆಗಿದೆಯೋ ಅಥವಾ ಇಲ್ವೊ ಎಂದು ನಿಮಗೆ ತಿಳಿಯುತ್ತದೆ. ಊರಿಗೆ ಬಂದವರು ನೀರಿಗೆ ಬರದೇ ಇರುತ್ತಾರೆಯೇ ಎಂದು ನಗೆ ಚಟಾಕಿ ಸಿಡಿಸಿದ್ದಾರೆ.