ಮಂತ್ರಿಗಿರಿಯಿಂದ ತೆಗೆದಿದ್ದ ಶಂಕರ್ ಗೆ ಮತ್ತೆ ಸ್ಥಾನ: ಕಾಂಗ್ರೆಸ್ ಉದ್ದೇಶ ಏನು?

Webdunia
ಶುಕ್ರವಾರ, 14 ಜೂನ್ 2019 (14:25 IST)
ಪಕ್ಷೇತರ ಶಾಸಕ ಶಂಕರ್ ಅವ್ರನ್ನು ಈ ಹಿಂದೆ ಮಂತ್ರಿಗಿರಿಯಿಂದ ತೆಗೆಯಲಾಗಿತ್ತು. ಈಗ ಅದೇ ಶಂಕರ್ ಗೆ ಸಚಿವ ಸ್ಥಾನ ಕೊಡ್ತಿದೀರಿ. ಇದರ ಹಿಂದೆ ಏನಿದೆ ಉದ್ದೇಶ ? ಅಂತ ಬಿಜೆಪಿ ಪ್ರಶ್ನೆ ಮಾಡಿದೆ.

ಯಾರ ಲಾಭಕ್ಕಾಗಿ ಮತ್ತೆ ಶಂಕರ್ ಗೆ ಸಚಿವ ಸ್ಥಾನ ಕೊಡ್ತಿದೀರಿ? ಹೀಗಂತ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದ್ದಾರೆ. ತಾವು ಆಡಳಿತಕ್ಕೆ ಬಂದ 24ಗಂಟೆಯೊಳಗೆ ರೈತರ ಸಾಲ ಮನ್ಮಾ ಮಾಡುತ್ತೇವೆ ಎಂದು ಕುಮಾರಸ್ವಾಮಿಯವರು ಧರ್ಮಸ್ಥಳ ಮತ್ತು ಶೃಂಗೇರಿಯಲ್ಲಿ ಹೇಳಿಕೆ ನೀಡಿದ್ದರು.

ಆದರೆ ಇಲ್ಲಿಯವರೆಗೆ ಒಬ್ಬನೇ ಒಬ್ಬ ರೈತನ ಸಾಲ ಮನ್ನಾ ಮಾಡಿಲ್ಲ. ಸಾಲ ಮನ್ನಾ ಮಾಡುವುದಾಗಿ ಹೇಳಿ ರೈತರ ಮೂಗಿಗೆ ತುಪ್ಪಹಚ್ಚಿದ್ದಾರೆ. ರೈತರಿಗೆ ಬ್ಯಾಂಕ್ ಗಳಿಂದ ನೊಟೀಸ್ ಬರುತ್ತಿದೆ. ಚುನಾವಣೆ ಆದ ತಕ್ಷಣ ಬ್ಯಾಂಕಿಗೆ ಕೊಟ್ಟ ಹಣವನ್ನೂ ವಾಪಸ್ ಪಡೆದು ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿದ್ರು.

ಬರಗಾಲ ಮತ್ತು ಅತಿವೃಷ್ಟಿಗೆ  ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ 7182 ಕೋಟಿ ರೂ.ಕೊಟ್ಟಿದೆ. ಅದನ್ನು ರಾಜ್ಯ ಸರ್ಕಾರ ಬಳಕೆಯೇ ಮಾಡಿಲ್ಲ. ಕೊಡಗಿನ ಮರು ನಿರ್ಮಾಣಕ್ಕೆ ಎಕರೆಗೆ 37,000 ರೂ. ನಂತೆ ಪರಿಹಾರ ಕೊಟ್ಟಿದ್ದು ಎನ್ ಡಿ ಆರ್ ಎಫ್ ಹಣ. ರಾಜ್ಯ ಸರ್ಕಾರದ ಬಳಿ ಜಿಲ್ಲಾಧಿಕಾರಿ ಬಳಿ 127 ಕೋಟಿ ರೂ. ಇದೆ.ಆದರೆ ಪರಿಹಾರ ಮಾತ್ರ ಕೊಡುತ್ತಿಲ್ಲ ಎಂದು ಕಿಡಿಕಾರಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಡಳಿತ ಯಂತ್ರವು ಕೋಮಾ ಸ್ಥಿತಿಗೆ ತಲುಪಿದೆ: ಸಿಎಂ ಯಾರೆಂದು ಮೊದಲು ಸ್ಪಷ್ಟಪಡಿಸಿ ಎಂದ ಅಶೋಕ್‌

Karnataka Weather:ಹಿಂಗಾರು ಮಳೆ ಮತ್ತೆ ಚುರುಕು, ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ಮಲ್ಲಿಕಾರ್ಜುನ ಖರ್ಗೆ ಭೇಟಿ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಕಿಂಗ್‌ ಹೇಳಿಕೆ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಮುಂದಿನ ಸುದ್ದಿ
Show comments