Select Your Language

Notifications

webdunia
webdunia
webdunia
webdunia

ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ; ತೀವ್ರ ಅಸಮಾಧಾನ ಹೊರಹಾಕಿದ ಹಿರಿಯ ಕೈ ನಾಯಕರು

ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ; ತೀವ್ರ ಅಸಮಾಧಾನ ಹೊರಹಾಕಿದ ಹಿರಿಯ ಕೈ ನಾಯಕರು
ಬೆಂಗಳೂರು , ಶುಕ್ರವಾರ, 14 ಜೂನ್ 2019 (13:10 IST)
ಬೆಂಗಳೂರು : ಇಂದು ಮಧ್ಯಾಹ್ನ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು ಪಕ್ಷೇತರ ಶಾಸಕರಿಗೆ ಮಣೆ ಹಾಕಲು ದೋಸ್ತಿ ನಾಯಕರು ನಿರ್ಧಾರ ಮಾಡಿದ್ದಾರೆ. ಆದರೆ ಈ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.




ನಮಗಿಲ್ಲದ ಸ್ಥಾನ ಮಾನ ಪಕ್ಷೇತರರಿಗೆ ನೀಡುವುದು ಸರಿಯಲ್ಲ. ರಾಜ್ಯ ಸಚಿವ ಸಂಪುಟ ಪುನಾರಚನೆಯಂತೂ ಮಾಡುವುದಿಲ್ಲ, ಯಾರನ್ನಾದ್ರೂ ಸೇರಿಸಿಕೊಳ್ಳಲಿ ಬಿಡಿ ಎಂದು  ಕಾಂಗ್ರೆಸ್ ನಾಯಕರು ಹಾಗೂ  ಸಚಿವ ಸ್ಥಾನಾಕಾಂಕ್ಷಿಗಳು  ಬೇಸರ ಹೊರಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ


ಅಲ್ಲದೇ ಉಳಿದ ಒಂದು ಸಚಿವ ಸ್ಥಾನ ಯಾರಿಗೆ ನೀಡ್ತಾರೆಂದು ಗೊತ್ತಿಲ್ಲ. ಏನೇ ತೀರ್ಮಾನ ತೆಗೆದುಕೊಂಡರು ಅವರೇ ಅನುಭವಿಸಲಿ ಎಂದು ಪಕ್ಷದ ಚಟುವಟಿಕೆಗಳಿಂದ ದೂರವಿರುವುದಕ್ಕೆ ಹಿರಿಯ ಕೈ ನಾಯಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ- ಪಕ್ಷೇತರ ಶಾಸಕನಿಂದ ಹೊಸ ಬಾಂಬ್