Select Your Language

Notifications

webdunia
webdunia
webdunia
webdunia

ನಾನು ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ- ಪಕ್ಷೇತರ ಶಾಸಕನಿಂದ ಹೊಸ ಬಾಂಬ್

ನಾನು ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ- ಪಕ್ಷೇತರ ಶಾಸಕನಿಂದ ಹೊಸ ಬಾಂಬ್
ಬೆಂಗಳೂರು , ಶುಕ್ರವಾರ, 14 ಜೂನ್ 2019 (13:07 IST)
ಬೆಂಗಳೂರು : ಜೆಡಿಎಸ್ ಕೋಟಾದಿಂದ ಮುಳಬಾಗಿಲ ಪಕ್ಷೇತರ ಶಾಸಕ ನಾಗೇಶ್ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಿದ್ದು, ಈ ನಡುವೆ ಇದೀಗ ಪಕ್ಷೇತರ ಶಾಸಕ ನಾಗೇಶ್, ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.




ಹೌದು. ಇಂದು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಹಿನ್ನಲೆ ಜೆಡಿಎಸ್ ಕೋಟಾದಡಿ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಅವರಿಗೆ ಸಚಿವ ಸ್ಥಾನ ನೀಡಲು ನಿರ್ಧಾರ ಮಾಡಲಾಗಿದ್ದು,  ಇಂದು ಪ್ರಮಾನ ವಚನ ಸ್ವೀಕರಿಸಲು ಬರುವಂತೆ ಹೆಚ್.ನಾಗೇಶ್ ಗೆ ಸಿಎಂ ಕಚೇರಿಯಿಂದ ಕರೆ ಕೂಡ ಬಂದಿದೆ.


ಆದರೆ ಮಾಧ್ಯಮವೊಂದರಲ್ಲಿ ಮಾತನಾಡಿದ  ಹೆಚ್.ನಾಗೇಶ್, ನಾನು ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ ಸದ್ಯಕ್ಕೆ ಸರ್ಕಾರಕ್ಕೆ ಬೆಂಬಲವಾಗಿ ಇರುತ್ತೇನೆ. ಪಕ್ಷೇತರ ಶಾಸಕನಾಗಿಯೇ ಸರ್ಕಾರದೊಂದಿಗೆ ನಿಲ್ಲುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.


ಅಲ್ಲದೇ ರಮೇಶ್ ಜಾರಕಿಹೊಳಿ ಮನೆಗೆ ಹೋಗಿದ್ದು ನಿಜ. ಜಾರಕಿಹೊಳಿ ಮನವೊಲಿಸೋಕೆ ನಾವು ಹೋಗಿದ್ವಿ. ನಮ್ಮ ಜೊತೆ ಬನ್ನಿ ಎಂದು ಮನವೊಲಿಸಲು ಹೋಗಿದ್ವಿ. ಆದರೆ ಅವ್ರು ಇಮಗೆ ಒಳ್ಳೆಯದಾದ್ರೆಹೋಗಿ ಅಂದ್ರು. ಸದಯ ಅನಿವಾರ್ಯ ಪರಿಸ್ಥಿತಿ ಇದೆ, ನಾವು ಬೆಂಬಲಿಸಲೇಬೇಕು. ಈ ವೇಳೆ ನಾವು ಚುನಾವಣೆಗೆ ಹೋಗಲು ಸಾಧ್ಯವೇ ಇಲ್ಲ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಯವರನ್ನು ಭೇಟಿಯಾದ ಬಿಎಂ.ಫಾರೂಕ್