Select Your Language

Notifications

webdunia
webdunia
webdunia
webdunia

ಮೈತ್ರಿ ಸಂಪುಟಕ್ಕೆ ಶಂಕರ್, ಹೆಚ್.ನಾಗೇಶ್ ಸೇರ್ಪಡೆ; ಪ್ರಮಾಣ ವಚನ ಸ್ವೀಕಾರ

ಮೈತ್ರಿ ಸಂಪುಟಕ್ಕೆ ಶಂಕರ್, ಹೆಚ್.ನಾಗೇಶ್ ಸೇರ್ಪಡೆ; ಪ್ರಮಾಣ ವಚನ ಸ್ವೀಕಾರ
ಬೆಂಗಳೂರು , ಶುಕ್ರವಾರ, 14 ಜೂನ್ 2019 (14:37 IST)
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದಲ್ಲಿ ನೂತನ ಮಂತ್ರಿಗಳಾಗಿ ಪಕ್ಷೇತರ ಶಾಸಕ ಶಂಕರ್ ಹಾಗೂ ಹೆಚ್.ನಾಗೇಶ್ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಶಂಕರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. 
ಇದೇ ವೇಳೆ ತಮ್ಮ ಕರ್ನಾಟಕ ಪ್ರಜ್ಞಾವಂತ  ಜನತಾ ಪಾರ್ಟಿಯನ್ನು (kpjp) ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವ ಪತ್ರ ನೀಡಿದರು. 

ಸಿದ್ದರಾಮಯ್ಯ ಅವರು ಶಂಕರ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

webdunia
ಪಕ್ಷೇತರ ಶಾಸಕ ಆರ್.ಶಂಕರ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಪ್ರಮಾಣ ವಚನ ಬೋಧಿಸಿದರು ರಾಜ್ಯಪಾಲರು. ಗೋಪ್ಯತಾ ಪ್ರಮಾಣ ವಚನ ಹಾಗೂ ಅಧಿಕಾರಪದ ಬೋಧಿಸಿದರು. ಪಕ್ಷೇತರ ಶಾಸಕ ಹೆಚ್.ನಾಗೇಶ್ ಸಂಪುಟ ದರ್ಜೆಯ ಸಚಿವರಾಗಿ ಗೋಪ್ಯತಾ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಆರ್.ಶಂಕರ್. ನೂತನ ಸಚಿವರನ್ನು ವೇದಿಕೆಯಲ್ಲಿ ಶುಭಹಾರೈಸಿದರು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್. ನೂತನ ಸಚಿವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು ರಾಜ್ಯಪಾಲರು.




Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಿಗಿರಿಯಿಂದ ತೆಗೆದಿದ್ದ ಶಂಕರ್ ಗೆ ಮತ್ತೆ ಸ್ಥಾನ: ಕಾಂಗ್ರೆಸ್ ಉದ್ದೇಶ ಏನು?