Select Your Language

Notifications

webdunia
webdunia
webdunia
webdunia

ಅಕ್ಕನನ್ನು ತನ್ನ ಕಾಮುಕತನದಿಂದ ಕೊಂದ ಈಗ ಆಕೆಯ ತಂಗಿಯ ಮೇಲೂ ತನ್ನ ವಕ್ರದೃಷ್ಟಿ ಬೀರಿದ್ದಾನೆ ಈ ಕಾಮಿ!

ಅಕ್ಕನನ್ನು ತನ್ನ ಕಾಮುಕತನದಿಂದ ಕೊಂದ ಈಗ ಆಕೆಯ ತಂಗಿಯ ಮೇಲೂ ತನ್ನ ವಕ್ರದೃಷ್ಟಿ ಬೀರಿದ್ದಾನೆ ಈ ಕಾಮಿ!
ರಾಮನಗರ , ಶನಿವಾರ, 10 ಫೆಬ್ರವರಿ 2018 (11:10 IST)
ರಾಮನಗರ : ಅಕ್ಕನ ಸಾವಿಗೆ ಕಾರಣವಾದ ವ್ಯಕ್ತಿಯೊಬ್ಬ  ಆಕೆಯ ತಂಗಿಗೂ ಸಹ ಲೈಂಗಿಕ ಕಿರುಕುಳ ನೀಡುತ್ತಿರೋ ಘಟನೆ ಚನ್ನಪಟ್ಟಣ ತಾಲೂಕಿನ ಬಿ.ವಿ ಹಳ್ಳಿಯಲ್ಲಿ ನಡೆದಿದೆ.


ಮಹಾಂತೇಶ್ ಎಂಬ ವ್ಯಕ್ತಿ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಆಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಗ್ರಾಮಸ್ಥರು ರಾಜಿ ಪಂಚಾಯ್ತಿ ಎಂದು ಹೇಳಿ ಮಹಾಂತೇಶ್‍ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡದಂತೆ ತಡೆದಿದ್ದರು .ಆದರೆ ಈಗ ಆತ ಆಕೆಯ ತಂಗಿಗೆ ಎಲ್ಲೆಂದರಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸೋದು, ಅಸಭ್ಯವಾಗಿ ಮಾತನಾಡುವ ಮೂಲಕ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೇ ನಿನ್ನಕ್ಕನಂತೆ ನಿನಗೂ ಒಂದು ಗತಿ ಕಾಣಿಸುತ್ತೇನೆ ಎಂದು ಕೂಡ ಹೇಳಿದ್ದಾನಂತೆ.


ಈ ವಿಚಾರದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಕೂಡ  ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ. ತನ್ನಕ್ಕನಿಗೆ ಆದ ಸ್ಥಿತಿ ಬೇರೊಬ್ಬರಿಗೆ ಆಗುವುದು ಬೇಡ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ನೊಂದ ಬಾಲಕಿ ಮನವಿ ಮಾಡಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಪ್ರಚಾರಕ್ಕೆ ಸತೀಶ ಜಾರಕಿಹೊಳಿ ಖರೀದಿಸಿದ್ದೇನು ಗೊತ್ತಾ