Select Your Language

Notifications

webdunia
webdunia
webdunia
webdunia

ಜುಲೈ 3 ರಿಂದ ಅಧಿವೇಶನ ಆರಂಭವಾಗಲಿದೆ- ಯು ಟಿ ಖಾದರ್

ಜುಲೈ 3 ರಿಂದ ಅಧಿವೇಶನ ಆರಂಭವಾಗಲಿದೆ- ಯು ಟಿ ಖಾದರ್
bangalore , ಬುಧವಾರ, 21 ಜೂನ್ 2023 (20:09 IST)
ಜುಲೈ 3 ರಿಂದ ಅಧಿವೇಶನ ಆರಂಭವಾಗಲಿದ್ದು,ರಾಜ್ಯಪಾಲರು ಜಂಟಿ ಅಧಿವೇಶನ ಕುರಿತು ಭಾಷಣ ಮಾಡಲಿದ್ದಾರೆ.12 ಗಂಟಗೆ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.ಜುಲೈ 3 ರಿಂದ 14 ನೇ ತಾರೀಖನತನಕ ಅಧಿವೇಶನ ನಡೆಯಲಿದೆ.ಮತ್ತೆ ಏನಾದರೂ ಬದಲಾವಣೆ ಇದ್ರೆ ಬಿಎಸ್ಸಿ  ನಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತೆ.ವಿಧಾನಸೌಭೆಯನ್ನ‌ ಡಿಜಿಟಲೈಸೆಷನ್ ಮಾಡುವ ಬಗ್ಗೆ ಅದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ.ದೇಶದಲ್ಲೇ ವಿಧಾನಭೆಯನ್ನ ಮಾದರಿಯ ಸಭೆಯನ್ನಾಗಿ ಮಾಡ್ತೀವಿ ಎಂದು ಯುಟಿ ಖಾದರ್ ಹೇಳಿದ್ರು.
 
ಸಚಿವಾಲಯದ ಸಿಬ್ಬಂದಿಗಳಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಯಾಗಲಿದೆ.ಅಲ್ಲದೇ ವಿಧಾನಸಭೆಯಲ್ಲಿ ಸಾವರ್ಕರ್ ಪೋಟೊ ವಿವಾದ ವಿಚಾರವಾಗಿಯೂ ಯು ಟಿ ಖಾದರ್ ಪ್ರತಿಕ್ರಿಯಿಸಿದ್ದು,ಯಾವ ಫೋಟೊ ಏನು ಅನ್ನೋದು ಸೆಕಂಡರಿ.ಅಧಿವೇಶನ ಚೆನ್ನಾಗಿ ನಡೆಯಬೇಕು ಅನ್ನೋದು ನಮ್ಮ‌ ಉದ್ದೇಶ.ನಾನು ಪೋಸ್ಟ್ ಮಾರ್ಟಂ ಮಾಡೋದಕ್ಕೆ ಹೋಗೋದಿಲ್ಲ.ಹಿಂದೆ ಆಗಿರೋದರ ಬಗ್ಗೆ ಚರ್ಚೆ ಬೇಡ.ಯಾವ ಫೋಟೊ ಇರುತ್ತೆ, ಇಲ್ಲ ಅನ್ನೋದು ಮುಂದೆ ಗೊತ್ತಾಗುತ್ತೆ.ಅಭಿವೃದ್ಧಿಯ ಕರ್ನಾಟಕ ಆಗಬೇಕು ಅನ್ನೋದು ನಮ್ಮ ಉದ್ದೇಶ.ರೂಲ್ಸ್ ಬ್ರೇಕ್ ಮಾಡಬಹುದು, ಸಂಪ್ರದಾಯ ಬ್ರೇಕ್ ಮಾಡೋಕಾಗಲ್ಲ.ಪೋಟೊ ಶಿಕ್ಷಣ ಕೊಡೋದಿಲ್ಲ, ಉದ್ಯೋಗ ಕೊಡೋದಿಲ್ಲ ಅದರ ಬಗ್ಗೆ ಚರ್ಚೆ ಏಕೆ?ಸಾವರ್ಕರ್ ಪೋಟೊ ಇರುತ್ತಾ, ಇಲ್ವಾ ಅನ್ನೋದಕ್ಕೆ ಸ್ಪೀಕರ್ ಉತ್ತರ ಕೊಡದೇ ನುಣುಚ್ಚಿಕೊಂಡರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಎಂ.ಎಫ್ ಅಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿ