Select Your Language

Notifications

webdunia
webdunia
webdunia
webdunia

ಆಣೆ ಮಾಡದೆ ಓಡಿಹೋಗಿ ನನ್ನ ವಿರುದ್ಧ ಆರೋಪಿಸುತ್ತಾರೆ - ಸಾರಾ ಮಹೇಶ್

ಆಣೆ ಮಾಡದೆ ಓಡಿಹೋಗಿ ನನ್ನ ವಿರುದ್ಧ ಆರೋಪಿಸುತ್ತಾರೆ - ಸಾರಾ ಮಹೇಶ್
ಮೈಸೂರು , ಗುರುವಾರ, 17 ಅಕ್ಟೋಬರ್ 2019 (10:43 IST)
ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಉಭಯ ನಾಯಕರ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಚಾಮುಂಡಿ ಸನ್ನಿಧಿಗೆ ಬಂದು ಆಣೆ ಮಾಡದೆ ಹಾಗೇ ವಾಪಾಸ್ಸಾದ ಹೆಚ್. ವಿಶ್ವನಾಥ್ ವಿರುದ್ಧ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.




ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಾರಾ ಮಹೇಶ್, ಆಣೆ ಮಾಡದೆ ಓಡಿಹೋಗಿ ನನ್ನ ವಿರುದ್ಧ ಆರೋಪಿಸುತ್ತಾರೆ. ವಿಶ್ವನಾಥ್ ಏನೆಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ. ಅಧಿಕಾರದ ಆಸೆಗಾಗಿ ಹೆಚ್. ವಿಶ್ವನಾಥ್ ಪಕ್ಷ ಬಿಟ್ಟುಹೋದ್ರು, ನನ್ನಿಂದ ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಹೆಚ್. ವಿಶ್ವನಾಥ್ ಕಿಡಿಕಾರಿದ್ದಾರೆ.


ಅಲ್ಲದೇ ಪದೇ ಪದೇ ವೈಯಕ್ತಿಕವಾಗಿ ಟೀಕೆ ಮಾಡಿ ನನಗೆ ನೋವು ಮಾಡಿದ್ದಾರೆ. ಹೀಗಾಗಿ ಹೆಚ್. ವಿಶ್ವನಾಥ್ ಮುಖ ನೋಡಲು ನನಗೆ ಇಷ್ಟವಿಲ್ಲ. ನನ್ನ ಕೊನೆ ಉಸಿರು ಇರುವವರೆಗೂ ಅವರನ್ನ ಭೇಟಿಯಾಗಲ್ಲ. ಸದನದಲ್ಲಿ ನಾನು ಹೇಳಿರುವ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಠುಸ್ ಆದ ಆಣೆ ಪ್ರಮಾಣದ ರಾಜಕೀಯ