Webdunia - Bharat's app for daily news and videos

Install App

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ: ಪೊಲೀಸರ ಕೈ ಸೇರಿದ ಪ್ರಾಥಮಿಕ ವರದಿ

Webdunia
ಬುಧವಾರ, 20 ಏಪ್ರಿಲ್ 2022 (17:08 IST)

ಉಡುಪಿಯ ಲಾಡ್ಜ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರ ಪ್ರಾಥಮಿಕ ವರದಿ ಪೊಲೀಸರ ಕೈ ಸೇರಿದ್ದು, ಅನುಮಾನ ಬಗೆಹರಿಯದ ಕಾರಣ ಮರಣೋತ್ತರ ಪರೀಕ್ಷೆಯ ವರದಿ ನಿರೀಕ್ಷಿಸಲಾಗಿದೆ.

ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ವಿರುದ್ಧ ಶೇ.೪೦ರಷ್ಟು ಕಮಿಷನ್‌ ಆರೋಪ ಮಾಡಿದ್ದ ಸಂತೋಷ್‌ ಪಾಟೀಲ್‌ ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ವಾಟ್ಸಪ್‌ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ಬಗ್ಗೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು ಪ್ರಾಥಮಿಕ ವರದಿ ಕೈ ಸೇರಿದ್ದು, ಈ ವರದಿ ಪ್ರಕಾರ ಸಂತೋಷ್‌ ಆತ್ಮಹತ್ಯೆ ಹಿಂದೆ ಯಾರದೇ ಕೈವಾಡ ಇಲ್ಲ ಎನ್ನಲಾಗಿದೆ.

ಸಂತೋಷ್‌ ಹಣ್ಣಿನ ಜ್ಯೂಸ್ ನಲ್ಲಿ ರಾಸಾಯನಿಕ ಬೆರೆಸಿ ಸೇವಿಸಿದ್ದು, ಜ್ಯೂಸ್‌ ಸೇವಿಸಿದ ಪೇಪರ್‌ ಗ್ಲಾಸ್‌ ಮತ್ತು ಸ್ಟ್ರಾ ಹಾನಿಯಾಗಿಲ್ಲ. ಅಥವಾ ಘಟನಾ ಸ್ಥಳದಲ್ಲಿ ಯಾವುದೇ ಬಲವಂತ ಮಾಡಿದ ಕುರುಹುಗಳು ಇಲ್ಲ.

ಸಂತೋಷ್‌ ಬಾಯಲ್ಲಿ ಕೂಡ ಯಾವುದೇ ಗುರುತು ಇಲ್ಲದ ಕಾರಣ ಸ್ಟ್ರಾ ಬಳಸಿ ಜ್ಯೂಸ್‌ ಸೇವಿಸಿರಬಹುದು. ಆದ್ದರಿಂದ ಸಂತೋಷ್‌ ಆತ್ಮಹತ್ಯೆ ಎಂದು ದೃಢಪಡುತ್ತದೆ. ಆದರೆ ಎಫ್‌ ಎಸ್‌ ಎಲ್‌ ವರದಿ ಬಂದ ನಂತರವೇ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Big Breaking:ಹತ್ತಿರದಿಂದ ಕೊಹ್ಲಿ ನೋಡುವ ಖುಷಿಯಲ್ಲಿದ್ದ ಆರ್‌ಸಿಬಿ ಫ್ಯಾನ್ಸ್‌ ಬಿಗ್‌ಶಾಕ್‌

ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷವೂ ಇರಬಹುದು, 10ವರ್ಷಗಳೂ ಇರಬಹುದು: ಸಚಿವ ಕೆಜೆ ಜಾರ್ಜ್‌

Gold Price today: ಚಿನ್ನದ ದರ ಇಂದು ಮತ್ತಷ್ಟು ಏರಿಕೆ

Gruhalakshmi: ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಲೇಟೆಸ್ಟ್ ಅಪ್ ಡೇಟ್

PM Kisan Yojana: ಪಿಎಂ ಕಿಸಾನ್ ಯೋಜನೆ 20 ನೇ ಕಂತು ಬಿಡುಗಡೆ ಯಾವಾಗ, ಇಲ್ಲಿದೆ ಡೀಟೈಲ್ಸ್

ಮುಂದಿನ ಸುದ್ದಿ
Show comments