Select Your Language

Notifications

webdunia
webdunia
webdunia
webdunia

ಕ್ವಾರಿಯಲ್ಲಿ ನಿಯಮ ಉಲ್ಲಂಘನೆ!

ಕ್ವಾರಿಯಲ್ಲಿ ನಿಯಮ ಉಲ್ಲಂಘನೆ!
ಚಿಕ್ಕಬಳ್ಳಾಪುರ , ಮಂಗಳವಾರ, 28 ಜೂನ್ 2022 (10:40 IST)
ಚಿಕ್ಕಬಳ್ಳಾಪುರ : ಭೂಮಿಯೇ ಗಡ ಗಡ ನಡುಗುವ ಹಾಗೆ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟಿಂಗ್ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನ ಅರ್ಕುಂದ್ ಗ್ರಾಮದ ಬಳಿ ನಡೆದಿದೆ.

ಅರ್ಕುಂದ್ ಹಾಗೂ ಕಾಟನಾಗೇನಹಳ್ಳಿ ಗ್ರಾಮದ ಮಧ್ಯೆ ಇರುವ ಬೆಟ್ಟದಲ್ಲಿ ಈ ಬ್ಲಾಸ್ಟಿಂಗ್ ಮಾಡಿದ್ದಾರೆ. ಈ ಗಣಿಗಾರಿಕೆ ಸ್ಪೋಟದ ದೃಶ್ಯವು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.

ಈ ಗಣಿಗಾರಿಕೆಯ ಸ್ಪೋಟದ ರಭಸಕ್ಕೆ ಬೃಹತ್ ಕಲ್ಲು ಬಂಡೆಗೆಳು ಆಕಾಶದತ್ತ ಚಿಮ್ಮುವಂತೆ ಕಾಣುತ್ತವೆ. ಸುಮಾರು 500-600 ಮೀ. ದೂರದವರೆಗೂ ಭಾರೀ ಗಾತ್ರದ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿದೆ.

ಈ ಸ್ಫೋಟದಿಂದಾಗಿ ರೈತರ ಜಮೀನುಗಳಿಗೆ ಆ ಬೃಹತ್ ಗಾತ್ರದ ಕಲ್ಲುಗಳು ಬಂದು ಬಿದ್ದಿದೆ. ನಿಯಮಗಳನ್ನು ಮೀರಿ ಕಲ್ಲು ಕ್ವಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟವಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಮತ್ತು ಮಗಳ ಮೇಲೆ ಅತ್ಯಾಚಾರ!?