Select Your Language

Notifications

webdunia
webdunia
webdunia
webdunia

ರುದ್ರೇಶ್ ಕೊಲೆ: ಕಿಂಗ್ ಪಿನ್ ಅರೆಸ್ಟ್

Rudresh murder
ಬೆಂಗಳೂರು , ಗುರುವಾರ, 3 ನವೆಂಬರ್ 2016 (11:37 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಮುಂಜಾನೆ ಆತ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ಬಲೆಗೆ ಬಿದ್ದಿದ್ದಾನೆ.
 
ಈಗಾಗಲೇ ನಾಲ್ಕು ಜನರನ್ನು ಬಂಧಿಸಿದ್ದ ಪೊಲೀಸರು ಮತ್ತೀಗ ಕೃತ್ಯದ ಮಾಸ್ಟರ್ ಮೈಂಡ್‌ನನ್ನು ಕೂಡ ಬಂಧಿಸುವಲ್ಲಿ ಯಶ ಕಂಡಿದ್ದಾರೆ.
 
ಬಂಧಿತನನ್ನು ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಬೆಂಗಳೂರು ಜಿಲ್ಲಾಧ್ಯಕ್ಷ ಅಸೀಂ ಷರೀಫ್ ಎಂದು ಗುರುತಿಸಲಾಗಿದ್ದು ಆತನನ್ನು ನ್ಯಾಯಾಲಕ್ಕೆ ಕೂಡ ಹಾಜರು ಹಡಿಸಲಾಗಿದೆ. ನ್ಯಾಯಾಧೀಶರು 14 ದಿನಗಳ ಕಾಲ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
 
ಅಕ್ಟೋಬರ್ 16 ರಂದು ನಗರದ ಕಾಮರಾಜ ರಸ್ತೆಯ ಬಿಇಒ ಕಚೇರಿ ಬಳಿ ಗೆಳೆಯರೊಂದಿಗೆ ಮಾತನಾಡುತ್ತ ನಿಂತಿದ್ದ ರುದ್ರೇಶ್ ಮೇಲೆ ವಾಸೀಂ ಅಹಮದ್, ಮಜರ್, ಮುಜೀಬ್, ಇರ್ಫಾನ್ ಪಾಷಾ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ತಕ್ಕ ಬೆಲೆ ತೆರಬೇಕು: ಅರುಣ್ ಜೇಟ್ಲಿ