Select Your Language

Notifications

webdunia
webdunia
webdunia
webdunia

ಶರಣಾಗಿ, ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ನಾಗನ ಮಾಸ್ಟರ್ ಪ್ಲಾನ್..?

ಶರಣಾಗಿ, ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ನಾಗನ ಮಾಸ್ಟರ್ ಪ್ಲಾನ್..?
ಬೆಂಗಳೂರು , ಮಂಗಳವಾರ, 9 ಮೇ 2017 (12:30 IST)
ತನ್ನ ಮನೆ ಮೇಲಿನ ದಾಳಿ ಬಳಿಕ ನಾಪತ್ತೆಯಾಗಿರುವ ರೌಡಿ ಶೀಟರ್ ನಾಗ ಪೊಲೀಸರ ಕೈಯಿಂದ ಬೀಳುವ ಲಾಠಿ ಏಟು ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
 

ಬಿಪಿ, ಶುಗರ್, ಎಂಆರ್`ಐ ಸ್ಕ್ಯಾನ್ ಸೇರಿದಂತೆ ಹಲವು ಪರೀಕ್ಷೆಗಳನ್ನ ಮಾಡಿಸಿಕೊಂಡು ವೈದ್ಯಕೀಯ ವರದಿ ಪಡೆದಿರುವ ನಾಗ, ಶರಣಾಗುವುದಕ್ಕೂ ಮುನ್ನ ವಕೀಲರ ಮೂಲಕ ವೈದ್ಯಕೀಯ ವರದಿಯನ್ನ ಕೋರ್ಟ್`ಗೆ ಸಲ್ಲಿಸಿ ಪೊಲೀಸರು ಹೊಡೆಯದಂತೆ ನಿರ್ಬಂಧ ಹೇರುವ ಪ್ರಯತ್ನ ನಡೆಸಿದ್ದಾನೆ ಎಂದು ವರದಿಯಾಗಿದೆ.

ಇತ್ತ, ಮತ್ತೊಂದು ವಿಡಿಯೋ ರಿಲೀಸ್ ಮಾಡಿರುವ ನಾಗ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ಮಾತನಾಡಿದ್ದಾನೆ. ಪ್ರಕರಣದಲ್ಲಿ ಪೊಲೀಸ್ ಅದಿಕಾರಿಗಳಿದ್ದರೂ ತನಿಖೆ ನಡೆಸುವುದಾಗಿ ಗೃಹ ಸಚಿವರು ನೀಡಿದ್ದ ಹೇಳಿಕೆ ಬಗ್ಗೆ ಪ್ರಶಂಸೆ.ವ್ಯಕ್ತಪಡಿಸಿರುವ ನಾಗ, ನೀವು ಭರವಸೆ ನೀಡಿದರೆ ಐದೇ ನಿಮಿಷದಲ್ಲಿ ಶರಣಾಗುವುದಾಗಿ ಹೇಳಿದ್ದಾನೆ. ಇದೇವೇಳೆ, ತಮ್ಮಲ್ಲಿರುವ ಕಪ್ಪು ಹಣವನ್ನ ಕೆಲ ಪೊಲೀಸರು ಬದಲಿಸಿಕೊಳ್ಳುವುದು ಹೇಗೆ ಎಂದು ತಲೆಕೆಡಿಸಿಕೊಳ್ಳುತ್ತಿರುವುದಾಗಿ ಹೊಸ ಬಾಂಬ್ ಸಿಡಿಸಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಮಲ್ಯಗೆ ನ್ಯಾಯಾಂಗ ನಿಂದನೆಯ ಉರುಳು