Select Your Language

Notifications

webdunia
webdunia
webdunia
webdunia

ಮೈಸೂರು ಬಿಟ್ಟು ತೆರಳುವಾಗ ಭಾವುಕರಾದ ರೋಹಿಣಿ ಸಿಂಧೂರಿ

ಮೈಸೂರು ಬಿಟ್ಟು ತೆರಳುವಾಗ ಭಾವುಕರಾದ ರೋಹಿಣಿ ಸಿಂಧೂರಿ
ಮೈಸೂರು , ಮಂಗಳವಾರ, 8 ಜೂನ್ 2021 (09:22 IST)
ಮೈಸೂರು: ಪಾಲಿಕೆ ಆಯುಕ್ತೆ ಜೊತೆಗಿನ ಕಿತ್ತಾಟದ ಬಳಿಕ ವರ್ಗಾವಣೆಯಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಬಿಟ್ಟು ತೆರಳುವ ಬಗ್ಗೆ ಮಾತನಾಡುವಾಗ ಭಾವುಕರಾಗಿದ್ದಾರೆ.


ಮೈಸೂರು ಜಿಲ್ಲಾಧಿಕಾರಿಯಾಗಿ ಜಿಲ್ಲೆಯನ್ನು ಕೊವಿಡ್ ಮುಕ್ತಗೊಳಿಸಲು ಶ್ರಮಿಸಿದ್ದೇನೆ. ಭೂ ಮಾಫಿಯಾ ಬಗ್ಗೆ ಕೆಲಸ ಮಾಡಲು ನನಗೆ ಕೆಲವರು ಅಡ್ಡಿಯಾದರು. ನನ್ನ ಪ್ರಯತ್ನ ನಾನು ಮಾಡಿದ್ದೇನೆ ಎಂದಿದ್ದಾರೆ.

ಇನ್ನು, ಇಷ್ಟು ದಿನ ಮೈಸೂರಿನ ಜನತೆ ನನ್ನನ್ನು ಮನೆ ಮಗಳಂತೆ ಕಂಡಿದ್ದಾರೆ. ಈಗ ತವರು ಬಿಟ್ಟು ಹೋಗುವ ಫೀಲ್ ಆಗುತ್ತಿದೆ. ಆದರೆ ಎಲ್ಲೇ ಹೋದರೂ ನನ್ನ ಕೆಲಸದ ಮೂಲಕವೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಗಳಿಗೆ ಕೇಂದ್ರದಿಂದಲೇ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ