Select Your Language

Notifications

webdunia
webdunia
webdunia
webdunia

ಡಿವೈಎಸ್‌ಪಿ ಕಾರನ್ನೇ ತಡೆದು ದರೋಡೆಗೆ ಯತ್ನಿಸಿದ ಭೂಪರು

ಡಿವೈಎಸ್‌ಪಿ ಕಾರನ್ನೇ ತಡೆದು ದರೋಡೆಗೆ ಯತ್ನಿಸಿದ ಭೂಪರು
ತುಮಕೂರು , ಬುಧವಾರ, 12 ಅಕ್ಟೋಬರ್ 2016 (19:57 IST)
ಖಾಸಗಿ ಕಾರಿನಲ್ಲಿ ತೆರಳುತ್ತಿದ್ದ ಮಧುಗಿರಿ ಡಿವೈಎಸ್‌ಪಿ ಅವರ ಕಾರು ಅಡ್ಡಗಟ್ಟಿದ ಯುವಕರ ತಂಡ ದರೋಡೆಗೆ ಯತ್ನಿಸಿದ ಘಟನೆ ಪಾವಗಡದ ಹೊರವಲಯದಲ್ಲಿ ನಡೆದಿದೆ. 
 
ಡಿವೈಎಸ್‌ಪಿ ಕಲ್ಲೇಶಪ್ಪ ಅವರು ಮಂಗಳವಾರ ರಾತ್ರಿ ಮಧುಗಿರಿಯಿಂದ ಪಾವಗಡಕ್ಕೆ ಖಾಸಗಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಅಡ್ಡಗಟ್ಟಿದ ಪಾನಮತ್ತ ಯುವಕರು ಡಿವೈಎಸ್‌ಪಿ ಕಲ್ಲೇಶಪ್ಪನವರ ಕಾರು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆ ಸಮಯದಲ್ಲಿ ಕಲ್ಲೇಶಪ್ಪನವರು ನಾನು ಡಿವೈಎಸ್‌ಪಿ ಎಂದು ಹೇಳಿದರೂ ಪಾನಮತ್ತ ಯುವಕರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಕಾರಿನಿಂದ ಇಳಿದ ಡಿವೈಎಸ್‌ಪಿ ಅವರು ಯುವಕರ ತಂಡವನ್ನು ಹೊಡೆದು ಹಿಡಿಯಲು ಯತ್ನಿಸಿದ್ದರು ಎನ್ನಲಾಗಿದೆ. 
 
ದರೋಡೆಗೆ ಯತ್ನಿಸಿದ ಪುಂಡ ಯುವಕರ ತಂಡದಲ್ಲಿ ದೀಪಕ್ ಹಾಗೂ ಅವಿನಾಶ್ ಎನ್ನುವವರು ಸ್ಥಳದಲ್ಲಿಯೇ ಸಿಕ್ಕಿಬಿದಿದ್ದಾರೆ. ಆದರೆ, ಉಳಿದ ಯುವಕರಾದ ಲೋಕೇಶ್ ಮತ್ತು ಶಶಿ ಎನ್ನುವ ಪುಂಡರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 
 
ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ದರೋಡೆಕೋರ ಯುವಕರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಪುರುಷರೊಂದಿಗೆ ಪತ್ನಿ ಸೆಕ್ಸ್: ಅಡ್ಡಿಯಾದ ಪತಿಯ ನಾಲಿಗೆ ಕಚಕ್ ಎನ್ನಿಸಿದ ಪತ್ನಿ