Webdunia - Bharat's app for daily news and videos

Install App

ಪಾದರಾಯನಪುರದಲ್ಲಿ ಪೊಲೀಸರೊಂದಿಗೆ ಮತ್ತೆ ಗಲಾಟೆ, ಕಿರಿಕ್

Webdunia
ಮಂಗಳವಾರ, 21 ಏಪ್ರಿಲ್ 2020 (14:58 IST)
ಕೋವಿಡ್ -19 ನಿಯಂತ್ರಣಕ್ಕಾಗಿ ಮುಂದಾಗಿರುವ ವೇಳೆ ಕೊರೊನಾ ವಾರಿಯರ್ಸ್, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪಾದರಾಯನಪುರದಲ್ಲಿ ಮತ್ತೆ ಗಲಾಟೆಗಳ ಸದ್ದು ಕೇಳಿಬರುತ್ತಿದೆ.

ಘಟನೆ ಸಂಬಂಧ 5 ಕೇಸ್ ಗಳನ್ನು ದಾಖಲು ಮಾಡಿಕೊಂಡಿರುವ ಸರಕಾರ ಐವತ್ತಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧನ ಮಾಡಿ, ಕಟ್ಟೆಚ್ಚರಕ್ಕೆ ಸೂಚನೆ ಕೊಟ್ಟಿದೆ.

ಆದರೆ ಪಾದರಾಯನಪುರದ ನಿವಾಸಿಗಳು ಕೆಲವರು ಕುಂಟು ನೆಪಗಳನ್ನು ಮಾಡುತ್ತಾ ಬೈಕ್ ಗಳಲ್ಲಿ ಎರಡ್ಮೂರು ಜನರು ಸಂಚಾರಕ್ಕೆ ಮುಂದಾಗುತ್ತಿದ್ದಾರೆ.

ಕೆಲವರು ಪೊಲೀಸರೊಂದಿಗೆ ತೀವ್ರ ವಾಗ್ವದ ನಡೆಸಿದ್ದಾರೆ. ವ್ಯಕ್ತಿಯೊಬ್ಬ ಆಸ್ಪತ್ರೆಯ ಹಳೆಯ ಬಿಲ್ ತೋರಿಸಿ ಆಸ್ಪತ್ರೆಗೆ ಹೋಗಬೇಕಿದೆ ಅಂತ ಗಲಾಟೆ ಮಾಡೋಕೆ ಶುರುಮಾಡಿದ್ದ. ಆದರೆ ಪೊಲೀಸರು ಪರಿಶೀಲನೆ ಮಾಡಿದಾಗ ಅದು ತುಂಬಾ ಹಳೆಯ ಬಿಲ್ ಎಂಬುದು ಗೊತ್ತಾಯಿತು.

ಇದರಿಂದ ವ್ಯಕ್ತಿಗೆ ಮರಳಿ ಹೋಗುವಂತೆ ಸೂಚಿಸಿದರು. ಕೆಲಹೊತ್ತು ಆತ ವಾಗ್ವಾದ ನಡೆಸಿದ. ಇಷ್ಟೇ ಅಲ್ಲ, ಇನ್ನೂ ಕೆಲವು ಜನರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ಚಿತ್ರಗಳನ್ನು ಕಂಡು ಬರುತ್ತಿವೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments