Select Your Language

Notifications

webdunia
webdunia
webdunia
webdunia

ಮೂಕಾಂಬಿಕೆಯ ಮೊರೆ‌ ಹೋದ ರೇವಣ್ಣ ಕುಟುಂಬ

ಮೂಕಾಂಬಿಕೆಯ ಮೊರೆ‌ ಹೋದ ರೇವಣ್ಣ ಕುಟುಂಬ
ಕೊಲ್ಲೂರು , ಸೋಮವಾರ, 20 ಫೆಬ್ರವರಿ 2023 (18:50 IST)
ಜೆಡಿಎಸ್‌ನಲ್ಲಿ ಹಾಸನ ಟಿಕೆಟ್‌ ಗೊಂದಲ ಬಗೆಹರಿಯುತ್ತಿಲ್ಲ. ಬದಲಾಗಿ ಇನ್ನಷ್ಟು ಗೋಜಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಮಾಜಿ ಮಂತ್ರಿ ಹೆಚ್‌.ಡಿ ರೇವಣ್ಣ ಕುಟುಂಬ ದೇವರ ಮೊರೆಹೋಗಿದೆ. ಚುನಾವಣಾ ಹೊಸ್ತಿಲಲ್ಲೇ ರೇವಣ್ಣ ಮತ್ತು ಕುಟುಂಬದ ಸದಸ್ಯರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ನವದುರ್ಗಿ ಚಂಡಿಕಾ ಯಾಗವನ್ನು ಮಾಡಿಸಿದ್ದಾರೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಈ ನವದುರ್ಗಿ ಚಂಡಿಕಾ ಯಾಗ ನಡೆದಿದೆ. ಮೂಲಗಳ ಪ್ರಕಾರ, ಹೆಚ್‌.ಡಿ ದೇವೇಗೌಡರ ಆರೋಗ್ಯ ಸುಧಾರಣೆಯಾಗಬೇಕು. ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಗೆಲುವು ಸಾಧಿಸಿ ಅಧಿಕಾರ ಬರುಬೇಕು ಹಾಗೂ ವೈಯಕ್ತಿಕ ರಾಜಕೀಯ ಯಶಸ್ಸು ಸಿಗಲೆಂದು ಯಾಗ ಮಾಡಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಯತ್ನಾಳ ಪರೋಕ್ಷ ವಾಗ್ದಾಳಿ