Select Your Language

Notifications

webdunia
webdunia
webdunia
webdunia

ರೈಲ್ವೆ ಹಳಿಯಲ್ಲಿ ಸಿಲುಕಿದ ಯುವಕನ ರಕ್ಷಣೆ

ರೈಲ್ವೆ ಹಳಿಯಲ್ಲಿ ಸಿಲುಕಿದ ಯುವಕನ ರಕ್ಷಣೆ
ದಾವಣಗೆರೆ , ಗುರುವಾರ, 9 ಫೆಬ್ರವರಿ 2023 (20:01 IST)
ಸಿನಿಮೀಯ ರೀತಿಯಲ್ಲಿ ರೈಲ್ವೆ ಹಳಿ ಮೇಲೆ ಸಿಲುಕಿದ ಯುವಕನನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ದಾವಣಗೆರೆ ನಗರದ ಅಶೋಕ್ ಸಿನಿಮಾ ಥಿಯೇಟರ್ ಬಳಿ ಘಟನೆ ನಡೆದಿದೆ. ರೈಲು ಬರುವ ವೇಳೆಗೆ ಹಳಿಯ ಮೇಲೆ ಯುವಕ ಬಿದ್ದಿದ್ದಾನೆ. ಯುವಕ ಬೀಳುತ್ತಿದ್ದಂತೆ ತಕ್ಷಣ ಸ್ಥಳೀಯರು ರಕ್ಷಣೆಗೆ ದೌಡಾಯಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಯುವಕನ ಪ್ರಾಣ ಉಳಿದಿದೆ. ಯುವಕನನ್ನ ರಕ್ಷಿಸಿದ ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕೆ ರೈಲು ಬಂದು ನಿಂತಿದೆ. ರೈಲು ಚಾಲಕ ಯುವಕನನ್ನು ಬೈದಿದ್ದಾನೆ. ಸಾರ್ವಜನಿಕರು ಯುವಕನನ್ನು ರಕ್ಷಣೆ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಯುವಕ ಆತ್ಮಹತ್ಯೆಗೆ ಯತ್ನಿಸಿದ್ದನಾ..? ಇಲ್ಲವೇ ಮದ್ಯಪಾನ ಮಾಡಿ ಅಥವಾ ಅಚಾತುರ್ಯದಿಂದ ಬಿದ್ದನಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಘಟನೆ ಕುರಿತು ರೈಲ್ವೆ ಪೊಲೀಸ್ ಠಾಣೆ ಸೇರಿ ಎಲ್ಲಿಯೂ ದೂರು ದಾಖಲಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸಿ ಎಂ ಬೊಮ್ಮಾಯಿ ಅವರಿಂದ ಇಂದು ಸುರಂಜನ್ ದಾಸ್ ಜಂಕ್ಷನ್ ಬಳಿಯ ಕೆಳಸೇತುವೆಲೋಕಾರ್ಪಣೆ