Publish Date: Sat, 17 Feb 2018 (20:25 IST)
Updated Date: Sat, 17 Feb 2018 (20:28 IST)
ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಲು ಇನ್ನುಮುಂದೆ ಪದವಿ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉನ್ನತ ಶಿಕ್ಷಣ ಮಟ್ಟ ಕಡಿಮೆಯಿದೆ. ಆದ್ದರಿಂದ ಪದವಿ ಪಡೆದವರಿಗೆ ಮಾತ್ರ ಸಿಂಡಿಕೇಟ್ ಸದಸ್ಯರಾಗಲು ಅವಕಾಶ ಎಂದಿದ್ದಾರೆ.
ಇದೇ ವೇಳೆ ಇಲಾಖೆಯ ಬಗ್ಗೆ ಪ್ರಸ್ತಾಪ ಮಾಡಿ, ಇಲಾಖೆಗೆ ಈವೆರೆಗೆ ದಕ್ಷ ಅಧಿಕಾರಿ ಸಿಕ್ಕಿಲ್ಲ. ಶಿಕ್ಷಣ ಇಲಾಖೆಯ ಕೆಲಸಗಳು ಕುಂಠಿತವಾಗಿವೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.