Webdunia - Bharat's app for daily news and videos

Install App

ಶಿವಯೋಗ ಮಂದಿರ, ಮಠಗಳಲ್ಲಿ ಸಂಬಂಧಿಗಳ ಪಾರುಪತ್ಯ: ತನಿಖೆಗೆ ಒತ್ತಾಯ

Webdunia
ಸೋಮವಾರ, 9 ಜುಲೈ 2018 (16:04 IST)
ಶಿವಯೋಗ ಮಂದಿರ ಜಂಗಮರಿಗೆ ಮಾತ್ರ ಸೀಮಿತವಾಗಿದೆ. ಶಿವಯೋಗ ಮಂದಿರವನ್ನು ಕೆಲವೇ ಜಂಗಮರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸ್ವಾಮೀಜಿಯೊಬ್ಬರು ವಿವಾದಿತ ಹೇಳಿಕೆ ನೀಡಿದ್ದಾರೆ. 


ಹುಬ್ಬಳ್ಳಿಯಲ್ಲಿ ಸಿದ್ದಗಿರಿ ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಶಿವಯೋಗ ಮಂದಿರ ಜಂಗಮರಿಗೆ ಮಾತ್ರ ಸೀಮಿತವಾಗಿದೆ. ಶಿವಯೋಗ ಮಂದಿರವನ್ನು ಕೆಲವೇ ಜಂಗಮರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಒಂದು ಉದ್ಯೋಗ ನೀಡುವ ಕಚೇರಿಯಂತೆ ಮಾಡಿದ್ದಾರೆ. ಮಠಗಳಲ್ಲಿ ಸನ್ಯಾಸಿಗಳ ಸಂಬಂಧಿಕರೇ ತುಂಬಿಕೊಂಡಿದ್ದಾರೆ. ವೀರಶೈವ ಮತ್ತು ಲಿಂಗಾಯತ ಮಹಾಸಭಾ ಈ ಕುರಿತು ಚಿಂತನೆ ನಡೆಸಲಿ. ಮಠದಲ್ಲಿರುವ ಸಂಬಂಧಿಗಳ ಪಾರುಪತ್ಯ ಕುರಿತು ತನಿಖೆ ನಡೆಸಲಿ. 


ನಮ್ಮದು ಹಿಂದೂ ಧರ್ಮದ ಲಿಂಗಾಯತ ಪಂಥ. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಅವಶ್ಯಕತೆಯಿಲ್ಲ. 
ಸ್ವಾಮಿಗಳಾದವರು ಮಾರ್ಗದರ್ಶಕರಾಗಬೇಕು, ರಾಜಕೀಯ ಮುಖಂಡರಾಗಬಾರದು. ಯಾವುದೇ ಒಂದು ರಾಜಕೀಯ ಪಕ್ಷ,  ವ್ಯಕ್ತಿಯನ್ನು ಬೆಂಬಲಿಸಬಾರದು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡಿದವರು ಈಗ ಸಾಕಪ್ಪ ಸಾಕು ಎನ್ನುತ್ತಿದ್ದಾರೆ.
ಸಮಾಜಕ್ಕೆ ಒಬ್ಬ ಒಳ್ಳೆಯ ಸನ್ಯಾಸಿಯನ್ನು ಕೊಡಬೇಕು ಎನ್ನುವುದು ನಮ್ಮ ನಿಲುವು. ಹೀಗಾಗಿ 300 ಜನ ಸ್ವಾಮೀಜಿಗಳು ಸೇರಿ ಸಮಾನ ಮನಸ್ಕ ಸನ್ಯಾಸಿಗಳ ವೇದಿಕೆ ಮಾಡಿಕೊಂಡಿದ್ದೇವೆ. ಜಾತಿ ಬೇಧಭಾವ ಇಲ್ಲದೆ ಸನ್ಯಾಸಿಗಳನ್ನು ಸಿದ್ಧಪಡಿಸುತ್ತೇವೆ.
ಬಸವತತ್ವ, ಅದ್ವೈತ ಸಿದ್ಧಾಂತ, ಪೌರೋಹಿತ್ಯ, ಕೀರ್ತನೆ, ಕೃಷಿ ಬಗ್ಗೆ ತರಬೇತಿ ನೀಡುತ್ತೇವೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಸೇನಾ ಕಾರ್ಯಾಚರಣೆಯಲ್ಲಿ 100 ಉಗ್ರರು ಫಿನೀಷ್‌: ವಿಪಕ್ಷಗಳಿಗೆ ರಾಜನಾಥ್‌ ಮಾಹಿತಿ

Karnataka BJP: ಆಪರೇಷನ್ ಸಿಂಧೂರ್ ಯಶಸ್ವಿಯಾಗಲೆಂದು ಬಿಜೆಪಿ ಪೂಜೆ

Rahul Gandhi: ಆಪರೇಷನ್ ಸಿಂದೂರ ಬಳಿಕ ರಾಹುಲ್ ಗಾಂಧಿ, ಖರ್ಗೆ ಇಷ್ಟು ಗಂಭೀರ ಯಾಕೆ: ನೆಟ್ಟಿಗರ ಪ್ರಶ್ನೆ

Operation Sindoor: ಸರ್ವಪಕ್ಷ ಸಭೆಗೆ ಮತ್ತೆ ಪ್ರಧಾನಿ ಮೋದಿ ಗೈರು: ವಿಪಕ್ಷಗಳ ಕೆಂಗಣ್ಣು

Arecanut price today: ಅಡಿಕೆ ಬೆಳೆಗಾರರಿಗೆ ಇಂದು ನಿರಾಸೆ, ಇಂದಿನ ದರ ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments