Webdunia - Bharat's app for daily news and videos

Install App

ಶಿರಾಡಿ ಘಾಟಿಯಲ್ಲಿ ಪದೇ ಪದೇ ರಸ್ತೆ ಕುಸಿತವಾಗುತ್ತಿರುವುದಕ್ಕೆ ಕಾರಣವೇ ಇದು

Krishnaveni K
ಗುರುವಾರ, 1 ಆಗಸ್ಟ್ 2024 (08:57 IST)
ಸಕಲೇಶಪುರ: ಶಿರಾಡಿ ಘಾಟಿಯಲ್ಲಿ ಮಳೆಗಾಲ ಬಂತೆಂದರೆ ಗುಡ್ಡ ಕುಸಿತದ ಸಮಸ್ಯೆ ಕಂಡುಬರುತ್ತಲೇ ಇದೆ. ಕಳೆದ ಮೂರು-ನಾಲ್ಕು ವರ್ಷದಿಂದ ಗುಡ್ಡ ಕುಸಿತದ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣವನ್ನೂ ತಜ್ಞರು ವಿವರಿಸುತ್ತಾರೆ.

ಶಿರಾಡಿ ಘಾಟಿಯಲ್ಲಿ ಇತ್ತೀಚೆಗೆ ನಡೆದ ರಸ್ತೆ ಕಾಮಗಾರಿಗಳು ಮತ್ತು ಎತ್ತಿನ ಹೊಳೆ ಯೋಜನೆ ಕಾಮಗಾರಿಗಳೇ ಈ ರೀತಿ ಗುಡ್ಡ ಕುಸಿತಕ್ಕೆ ಕಾರಣ ಎಂಬುದು ಹಲವರ ಅಭಿಪ್ರಾಯವಾಗಿದೆ. ಈ ವರ್ಷವಂತೂ ಕಳೆದ ಎರಡು ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಶಿರಾಡಿ ಘಾಟಿ ಅಪಾಯಕಾರಿ ಸ್ಥಳವಾಗಿದೆ.

ಚಾರ್ಮಾಡಿಗಿಂತಲೂ ಶಿರಾಡಿಯಲ್ಲಿ ಹೆಚ್ಚಿನ ಭೂ ಕುಸಿತವಾಗುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದ ಅವೈಜ್ಞಾನಿಕ ರಸ್ತೆ ಕಾಮಗಾರಿಗಳೇ ಕಾರಣ ಎನ್ನುವುದು ತಜ್ಞರ ಅಭಿಮತ. ಇತ್ತೀಚೆಗೆ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ದುರಂತಕ್ಕೂ ತಜ್ಞರು ಇದೇ ಕಾರಣ ನೀಡಿದ್ದರು. ರಸ್ತೆ ನಿರ್ಮಾಣ ಮಾಡುವಾಗ ನೈಸರ್ಗಿಕ ನೀರು ಹರಿದು ಹೋಗಲು ಸ್ಥಳಾವಕಾಶ ಬಿಡದೇ ಇರುವುದರಿಂದ ಮಳೆಗಾಲದಲ್ಲಿ ನೀರು ಹರಿದು ಮಣ್ಣು ಸಡಿಲವಾಗುತ್ತಿದೆ. ಇದರಿಂದ ಗುಡ್ಡ ಕುಸಿತವಾಗುತ್ತಿದೆ ಎಂದು ತಜ್ಞರು ಹೇಳಿದ್ದರು.

ಶಿರಾಡಿ ಘಾಟಿ ವಿಚಾರದಲ್ಲೂ ಇದೇ ಆಗುತ್ತಿದೆ. ಎತ್ತಿನ ಹೊಳೆ ಯೋಜನೆಗೆ ಶಿರಾಡಿ ಘಾಟಿಯಲ್ಲಿ ಭಾರೀ ಕಾಮಗಾರಿಯೇ ನಡೆಯಿತು. ರಸ್ತೆ ಕಾಮಗಾರಿಗಳ ವೇಳೆಯೂ ನೀರು ಹರಿದು ಹೋಗಲು ಜಾಗವಿಲ್ಲದಾಯಿತು. ಇದರಿಂದಾಗಿಯೇ ಶಿರಾಡಿ ಘಾಟಿಯಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಭೂಕುಸಿತವಾಗುತ್ತಿದೆ ಎನ್ನಲಾಗಿದೆ. ಮಾನವ ಮಾಡುವ ತಪ್ಪುಗಳಿಗೆ ಪ್ರಕೃತಿಯೇ ಪಾಠ ಕಲಿಸುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುತ್ತಪ್ಪ ರೈ ಮಗ ರಿಕ್ಕಿ ಮೇಲೆ ಗುಂಡಿನ ದಾಳಿ: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ರಕಾಶ್ ರೈ

Bappanadu Viral Video: ಬಪ್ಪನಾಡು ದುರ್ಗಾಪರಮೇಶ್ವರಿ ರಥ ಏಕಾಏಕಿ ಕುಸಿತ: ಮೇಲಿದ್ದ ಅರ್ಚಕರನ್ನು ದೇವಿಯೇ ಕಾಪಾಡಿದ್ಳು

Kannada Viral Video: ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಕಲಿ: ಕನ್ನಡಿಗ ಆಟೋ ಚಾಲಕನಿಗೆ ಹಿಂದಿವಾಲ ಧಮ್ಕಿ

Arecanut price today: ಅಡಿಕೆಗೂ ಇಲ್ಲ, ಕಾಳುಮೆಣಸಿಗೂ ಇಲ್ಲ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

DK Shivakumar: ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

ಮುಂದಿನ ಸುದ್ದಿ
Show comments