Select Your Language

Notifications

webdunia
webdunia
webdunia
webdunia

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ರೆಡಿ

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ರೆಡಿ
ಬೆಳಗಾವಿ , ಬುಧವಾರ, 25 ಸೆಪ್ಟಂಬರ್ 2019 (19:35 IST)
ಅಕ್ಟೋಬರ್ 2 ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕೋಕೆ ಸಿದ್ಧ ಅಂತ ಹೇಳಿದ್ದಾರೆ.

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಕ್ಟೋಬರ್2ರಂದು ಭಾರತೀಯ ಕೃಷಿಕ ಸಮಾಜ ರೈತ ಸಂಘಟನೆ ವತಿಯಿಂದ ಬೆಳಗಾವಿಯ ಸುವರ್ಣ ಸೌಧದ ಎದುರು ಒಂದು ದಿನದ ಸತ್ಯಾಗ್ರಹ ಮಾಡ್ತೇವೆ ಅಂತ ರೈತ ಮುಖಂಡ ಸಿದಗೌಡ ಮೋದಗಿ ಹೇಳಿದ್ದಾರೆ.

ರೈತರನ್ನು, ಬಡವರನ್ನು ನಿರ್ಲಕ್ಷ್ಯ ಮಾಡಿರುವ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಗಾಂಧಿ ಜಯಂತಿಯ ದಿನವೇ ಸುವರ್ಣ ಸೌಧದ ಎದುರಿಗೆ ಒಂದು ದಿನದ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ರೈತರ ಬೇಡಿಕೆಗಳಾದ ಉತ್ತರ ಕರ್ನಾಟಕದ ನೆರೆ ಮತ್ತು ಬರ ಪರಿಹಾರ ಹಾಗೂ ಕಾಮಗಾರಿಗಳಿಗೆ 10 ಸಾವಿರ ಕೋಟಿ ಶಾಶ್ವತ ಪರಿಹಾರ ಸ್ಥಾಪಿಸಬೇಕು.

ನೆರೆ ಸಂತ್ರಸ್ಥರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ಕರ್ನಾಟಕ ನೀರಾವರಿ ನಿಗಮ ಸ್ಥಾಪಿಸಬೇಕು ಮತ್ತು ರಸಗೊಬ್ಬರ ಉತ್ಪಾಧನಾ ಘಟಕ ಸ್ಥಾಪಿಸಬೇಕು ಹಾಗೂ ಸುವರ್ಣ ಸೌಧಕ್ಕೆ ಕೂಡಲೇ ಕಚೇರಿಗಳ ಸ್ಥಳಾಂತರ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಮಾಡಲಾಗುತ್ತದೆ ಎಂದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಡಿ.ಕೆ.ಶಿವಕುಮಾರ್ ಜೈಲು ಸೇರಲು ಮಾಡಿದ ದೊಡ್ಡ ಡ್ರಾಮಾ?