Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯ-ರವಿಕುಮಾರ್ ಒತ್ತಾಯ

ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯ-ರವಿಕುಮಾರ್ ಒತ್ತಾಯ
bangalore , ಗುರುವಾರ, 16 ನವೆಂಬರ್ 2023 (15:00 IST)
ನಾನು ಬೆಳಗ್ಗೆ ಟಿವಿ ನೋಡ್ತಿದ್ದೆ.ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಸಭೆಯಲ್ಲಿ ಹೊರಗೆ ಬಂದು ಯತೀದ್ರ ಅವರು ಅವರ ತಂದೆಗೆ ಫೋನ್ ಮಾಡ್ತಾರೆ.ಅಪ್ಪ ನಾನು ಹೇಳಿದ ನಾಲ್ಕೈದು ಹೆಸರು ಮಾತ್ರ ಮಾಡಿ.ಉಳಿದದ್ದು ಮಾಡಬೇಡಿ ಅಂತ.ಮಹದೇವ್ ನಾನು ಹೇಳಿದ ನಾಲ್ಕು ಮಾತ್ರ ಮಾಡಿ, ಅದನ್ನ ಬಿಟ್ಟು ಮಾಡಬೇಡಿ ಅಂತ.ಅಂದ್ರೆ ಯಾವುದು ಡೀಲ್ ಆಗಿದೆ ಅದನ್ನ ಮಾತ್ರ ಮಾಡಿ.ಡೀಲ್ ಆಗದಿರೋದು ಬೇಡ ಅಂತ ತಂದೆ ಸಿದ್ದರಾಮಯ್ಯಗೆ ಯತಿಂದ್ರ ಹೇಳಿದ್ದಾರೆ.
 
ಇವರು ಶಾಡೋ ಸಿಎಂ.ಸಿಎಂಬಳಿ ಕೆಲಸ ಆಗಬೇಕು ಅಂದ್ರೆ ಯತೀಂದ್ರ ಸಿದ್ದರಾಮಯ್ಯ ಚೀಟಿ ಕಳಿಸಬೇಕು.ಸಿಎಂ ಬಳಿ ಮನವಿ ಮಾಡ್ತೀನಿ.ವಿಜಯೇಂದ್ರ ಅವರಿಗೆ ಕುಟುಂಬ ಅಂತೀರಿ.ನೀವು ಕೋಟ್ಯಾಂತರ ಅವ್ಯವಹಾರ ಮಾಡ್ತಿದ್ದೀರಿ.ಸಿಎಂ ಬಳಿ ಒಂದಷ್ಟು ಭ್ರಷ್ಟಾಚಾರ ಇದೆ.ಡಿಸಿಎಂ ವಿರುದ್ಧ ಕಂಟ್ರಾಕ್ಟರ್ಸ್ ಒಂದಷ್ಟು ಭ್ರಷ್ಟಾಚಾರ ಆರೋಪ ಮಾಡ್ತಿದ್ದಾರೆ.

ಈ ಸರ್ಕಾರ ಬಂದ ಮೇಲೆ ಯಾರನ್ನಾದ್ರೂ ಕೇಳಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿದೆ.ನಮ್ಮ‌ಬಿಜೆಪಿ ಮೇಲೆ 40% ಸರ್ಕಾರ ಅಂತ ಆರೋಪ ಮಾಡಿದ್ರು.ಯಾವುದನ್ನೂ ಸಾಭೀತು ಮಾಡಲು ಆಗಲಿಲ್ಲ‌.ಇವರದ್ದು 60%, 80% ಎಷ್ಟು ಪರ್ಸೆಂಟ್ ಸರ್ಕಾರ ಅಂತ ಸ್ಪಷ್ಟಪಡಿಸಬೇಕು.ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ವಿಧಾನ ಪರಿಷತ್ ನಾಯಕ ರವಿಕುಮಾರ್ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರಿಗೆ ಸೆಡ್ಡು ಹೊಡೆದ ಜೆಡಿಎಸ್ ನಾಯಕರು