Select Your Language

Notifications

webdunia
webdunia
webdunia
Saturday, 12 April 2025
webdunia

ರವಿ ಬೆಳೆಗರೆ ಪೊಲೀಸ್ ಕಸ್ಟಡಿ ಅಂತ್ಯ ; ಕೋರ್ಟ್ ನತ್ತ ಬೆಳಗೆರೆ

ರವಿ ಬೆಳಗೆರೆ
ಬೆಂಗಳೂರು , ಸೋಮವಾರ, 11 ಡಿಸೆಂಬರ್ 2017 (06:54 IST)
ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣದ ಹಿನ್ನೆಲೆ ಇಂದು ರವಿ ಬೆಳೆಗರೆ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ, ರವಿಬೆಳಗೆರೆಯನ್ನು ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಹಾಜರು ಪಡಿಸಲಿದ್ದಾರೆ.


1ನೇ ಎಸಿಎಂಎಂ ಕೋರ್ಟ್ ಗೆ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ಹಾಜರುಪಡಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಎಸಿಪಿ ನೇತೃತ್ವದಲ್ಲಿ  ನ್ಯಾಯಾಧೀಶ ಜಗದೀಶರ ಮುಂದೆ  ರವಿಬೆಳಗೆರೆಯನ್ನು  ಹಾಜರುಪಡಿಸಲಾಗುವುದು.


ತನಿಖೆ ವೇಳೆ ರವಿ ಬೆಳಗೆರೆ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆ, ಅವರ ಕಸ್ಟಡಿ ಮುಂದುವರಿಸುವಂತೆ ಸಿಸಿಬಿ ಪೊಲೀಸರು ಕಾಲಾವಕಾಶ ಕೋರಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರಿಂದ ಮಾಮೂಲಿ ವಸೂಲಿ!