Select Your Language

Notifications

webdunia
webdunia
webdunia
webdunia

ರಥೋತ್ಸವ ವೇಳೆ ದುರಂತ: ರಥ ಬಿದ್ದು ಇಬ್ಬರು ಭಕ್ತರ ಸಾವು

ರಥೋತ್ಸವ ವೇಳೆ ದುರಂತ: ರಥ ಬಿದ್ದು ಇಬ್ಬರು ಭಕ್ತರ ಸಾವು
bengaluru , ಮಂಗಳವಾರ, 14 ಜೂನ್ 2022 (18:14 IST)
ಕಾಳಿಯಮ್ಮ ರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಇಬ್ಬರು ಭಕ್ತರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಆನೆಕಲ್ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಮಿಳುನಾಡು ಗಡಿ ಭಾಗದ ಮಾದೇನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ ಮಾದೇನಹಳ್ಳಿಯ ಮನೋಹರ್ ಮತ್ತು ಶರವಣನ್ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿ ಕಾಳಿಯಮ್ಮ ರಥೋತ್ಸವ ನಡೆಯುತ್ತಿದ್ದಾಗ ರಥವನ್ನು ಎಳೆಯುತ್ತಿದ್ದಾಗ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದಿದೆ. ಈ ದಿಢೀರ್ ಘಟನೆಯಿಂದ ಜನರು ಆತಂಕಕ್ಕೀಡಾಗಿದ್ದಾರೆ.
ಈ ಜಾತ್ರೆಯಲ್ಲಿ ಸುಮಾರು ಸುತ್ತಮುತ್ತಲ ಗ್ರಾಮಗಳಿಂದ ಸುಮಾರು 18 ಸಾವಿರ ಭಕ್ತರು ನೆರೆದಿದ್ದರು. ಪಾಪರಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಡ್ಡಿದರ ಏರಿಕೆ, ಸುಂಕ ಕಡಿತದ ನಡುವೆಯೂ ಸಗಟುದರ ಹಣದುಬ್ಬರ ಜಿಗಿತ!