Webdunia - Bharat's app for daily news and videos

Install App

ಆಟೋ ಚಾಲಕರು V/S ರಾಪಿಡೋ

Webdunia
ಗುರುವಾರ, 20 ಜನವರಿ 2022 (15:48 IST)
ದ್ವಿಚಕ್ರ ವಾಹನದಿಂದ ಪ್ರಯಾಣ ಸೇವೆ ಒದಗಿಸಲು ಅವಕಾಶವಿಲ್ಲದಿದ್ದರೂ ಬೆಂಗಳೂರು ನಗರದಲ್ಲಿ ರ್‍ಯಾಪಿಡೋ ಬೈಕ್ ಸೇವೆಗೆ ಅವಕಾಶ ಕಲ್ಪಿಸಿಕೊಟ್ಟಿರುವ ಸಾರಿಗೆ ಅಧಿಕಾರಿಗಳ ವಿರುದ್ಧ ಆಟೋ ಚಾಲಕರು ತಿರುಗಿ ಬಿದ್ದಿದ್ದಾರೆ. ರ್‍ಯಾಪಿಡೋ ಬೈಕ್ ಸೇವೆಯಿಂದ ಆಟೋ ಚಾಲಕರು ಬೀದಿಗೆ ಬಿದ್ದಿದ್ದೇವೆ.
ನಮ್ಮ ಆಟೋಗಳನ್ನು ವೈಟ್ ಬೋರ್ಡ್‌ಗಳನ್ನಾಗಿ ಪರಿವರ್ತನೆ ಮಾಡಿಕೊಡಿ ಎಂದು ಗಾಂಧಿಗಿರಿ ಹೋರಾಟ ಆರಂಭಿಸಿದ್ದಾರೆ.
 
ಬೆಂಗಳೂರಿನಲ್ಲಿ ಆಟೋ ಚಾಲಕರ ಮೇಳೆ ಹೊಟ್ಟೆ ಹೊಡೆದು ಕಡಿಮೆ ಬೆಲೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಸೇವೆ ಒದಗಿಸುತ್ತಿರುವ ರ್‍ಯಾಪಿಡೋ ಬೈಕ್‌ಗಳನ್ನು ನಿಲ್ಲಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೈಟ್ ಬೋರ್ಡ್ ವಾಹನಗಳಲ್ಲಿ ಅದೇಗೆ ಕಮರ್ಷಿಯಲ್ ಸೇವೆ ನೀಡುತ್ತಿದ್ದಾರೆ ತನಿಖೆ ನಡೆಸಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂದೆ 20 ಕ್ಕೂ ಹೆಚ್ಚು ಆಟೋ ಚಾಲಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
 
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರ್‍ಯಾಪಿಡೋ ಬೈಕ್ ಸವಾರರು, ನಮಗೆ ಸೇವೆ ಮಾಡಲು ಆಪ್‌ನಲ್ಲಿ ಅವಕಾಶ ಕೊಟ್ಟಿದ್ದಾರೆ. ಅದಕ್ಕೆ ನಾವು ಮಾಡುತ್ತಿದ್ದೇವೆ. ಇದರ ಬಗ್ಗೆ ತಕರಾರು ಇದ್ದರೆ ರ್‍ಯಾಪಿಡೋ ಬೈಕ್ ಸೇವೆ ಒದಗಿಸುತ್ತಿರುವ ಆಪ್ ಮತ್ತು ಕಂಪನಿ ವಿರುದ್ಧ ಆಟೋ ಚಾಲಕರು ಹೋರಾಟ ಮಾಡಲಿ. ನಮ್ಮ ಬೈಕ್ ನಿಲ್ಲಿಸಿ ನಮ್ಮ ಹೊಟ್ಟೆ ಮೇಲೆ ಯಾಕೆ ಹೊಡೆಯುತ್ತೀರಿ ಎಂದು ರ್‍ಯಾಪಿಡೋ ಬೈಕ್ ಸವಾರರು ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೇಪಾಳದಲ್ಲಿ ಸಿಲುಕಿದ್ದ ಕನ್ನಡಿಗನ ಜೊತೆ ಸಿಎಂ ಡಿಕೆಶಿ ಮಾತು: ನಾನು ನಿಮ್ಮ ಅಭಿಮಾನಿ ಸಾರ್ ಎಂದ ಪ್ರವಾಸಿಗ Video

ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗನ ಜತೆ ಸಿಎಂ ಡಿಕೆ ಶಿವಕುಮಾರ್ ವಿಡಿಯೋ ಕಾಲ್‌ನಲ್ಲಿ ಮಾತುಕತೆ

ನೇಪಾಳ ಪ್ರವಾಹ: 80 ಯಾತ್ರಾರ್ಥಿಗಳು ನಾಪತ್ತೆ, ಈಶಾ ಶಿಬಿರದಲ್ಲಿ ಕಂಬನಿ ಮಿಡಿದ ಸದ್ಗುರು, Video

ನೇಪಾಳ ಮೇಘಸ್ಫೋಟದಲ್ಲಿ ಇಶಾ ಫೌಂಡೇಶನ್‌ನ 77 ಯಾತ್ರಿಕರು ಕಣ್ಮರೆ: ಸಂಪರ್ಕ ಸಾಧಿಸಲು ಜಗ್ಗಿ ವಾಸುದೇವ್ ಹರಸಾಹಸ

ಅಪಘಾತವನ್ನು ತಪ್ಪಿಸಲು ಹೋಗಿ ಪಲ್ಟಿಯಾದ ಬಸ್‌, ಮುಂದೆ ಇದ್ದ ಸವಾರ ಪಾರಾಗಿದ್ದೆ ಪವಾಡ, Video

ಮುಂದಿನ ಸುದ್ದಿ
Show comments