Select Your Language

Notifications

webdunia
webdunia
webdunia
webdunia

ಮಳೆಯಿಂದ ಜಾಗರಣೆ ಮಾಡಿದ ಬಾಣಂತಿಯರು

ಮಳೆ
ಭಾರಿ ಮಳೆ ಸುರಿದ ಕಾರಣದಿಂದ ಮಳೆ ನೀರಿನಿಂದಾಗಿ ಬಾಣಂತಿಯರು ಜಾಗರಣೆ ಮಾಡಿದ ಘಟನೆ ನಡೆದಿದೆ.

ದಾವಣಗೆರೆಯಲ್ಲಿ ಮಳೆ ಅವಾಂತಾರ ಮುಂದುವರಿದಿದೆ. ರಾತ್ರಿಯಲ್ಲಾ ಜಾಗರಣೆ ಮಾಡಿದ ಗರ್ಭಿಣಿ, ಬಾಣಂತಿಯರು ಪರದಾಡಿದರು.

ಮಳೆಯಿಂದಾಗಿ ಹೆರಿಗೆ ಆಸ್ಪತ್ರೆಯೊಳಗೆ ಮಳೆ ನೀರು ಅಪಾರ ಪ್ರಮಾಣದಲ್ಲಿ ನುಗ್ಗಿದೆ. ನೀರು ನುಗ್ಗಿದರೂ ಕೇರ್ ಮಾಡದ ಜಿಲ್ಲಾಸ್ಪತ್ರೆಯ ಅಧಿಕಾರಿಗಳ ವಿರುದ್ಧ ರೋಗಿಗಳು ಹಾಗೂ ಸಂಬಂಧಿಕರು ಹಿಡಿಶಾಪ ಹಾಕಿದರು.

ಆಜಾದ್ ನಗರದಲ್ಲಿಯು ಮಳೆಯ ಅವಾಂತರ ಮುಂದುವರಿದಿದೆ. ಎಡಬಿಡದೆ ಸುರಿದ ಮಳೆಗೆ ಮನೆಗಳು ಕುಸಿದಿವೆ. ಹೀಗಾಗಿ ಬಡ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.  ದಾವಣಗೆರೆಯ ರಾತ್ರಿ ಮಳೆಗೆ ಜನತೆ ಅಲ್ಲೋಲ ಕಲ್ಲೋಲವಾಗಿದ್ದು, ಭಯಭೀತಿಗೊಂಡಿದ್ದಾರೆ. ಸಾಕಷ್ಟು ಹಾನಿ ಮಳೆಯಿಂದ ಸಂಭವಿಸಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮುಲು ಮೇಲೆ ಹರಿಹಾಯ್ದ ಡಿ.ಕೆ.ಶಿವಕುಮಾರ್