Select Your Language

Notifications

webdunia
webdunia
webdunia
webdunia

ಮಳೆಯ ರೌದ್ರಾವತಾರ: ಕಂಗಾಲಾದ ಜನರು

ಮಳೆಯ ರೌದ್ರಾವತಾರ: ಕಂಗಾಲಾದ ಜನರು
ಚಿಕ್ಕೋಡಿ , ಸೋಮವಾರ, 24 ಜೂನ್ 2019 (15:15 IST)
ಮಳೆಯ ರೌದ್ರಾವತಾರ ಹಾಗೂ ಧಾರಾಕಾರವಾಗಿ ಸುರಿದಿರುವುದಕ್ಕೆ ಜನಜೀವನ ತತ್ತರಗೊಂಡಿದೆ.

ಬೆಳಗಾವಿ ಜಿಲ್ಲೆಯಾದ್ಯಂತ ಹಲವೆಡೆ ವರುಣನ ರೌದ್ರಾವತಾರ ಮುಂದುವರಿದಿದೆ.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಮಳೆ ಜನರನ್ನು ಹೈರಾಣಾಗಿಸಿದೆ.

ಚಿಕ್ಕೋಡಿ, ಅಥಣಿ, ಹುಕ್ಕೇರಿ, ರಾಯಭಾಗ ತಾಲ್ಲೂಕಿನಲ್ಲಿ ಸುರಿದ ಮಳೆ ಜನಜೀವನ ಅಸ್ತವ್ಯಸ್ತಗೊಳ್ಳಲು ಕಾರಣವಾಗಿದೆ.

ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದರೆ, ತುಂಬಿ ಹರಿದ ಹಳ್ಳ ಕೊಳ್ಳಗಳು ಭಾರೀ ಮಳೆಗೆ ಸಾಕ್ಷಿಯಾಗಿವೆ.

ಯಕ್ಸಂಬಾ ಪಟ್ಟಣದಲ್ಲಿ ನೂರಾರು ಅಡಿ ಕೊಚ್ಚಿ ಹೋಗಿವೆ ಕಾರು, ಮೋಟಾರು ಬೈಕ್ ಗಳು.

ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಅಲ್ಲಲ್ಲಿ ಬಿದ್ದ ಮರಗಳು, ವಿದ್ಯುತ್ ಕಂಬಗಳು ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿವೆ.




Share this Story:

Follow Webdunia kannada

ಮುಂದಿನ ಸುದ್ದಿ

ಗನ್‌ ಮ್ಯಾನ್‌ ಕೈಗೆ ಶೂ ಕೊಟ್ಟು ದರ್ಪ ಮೆರೆದ ಕಾಂಗ್ರೆಸ್‌ ಶಾಸಕ