Publish Date: Thu, 18 Feb 2021 (09:30 IST)
Updated Date: Thu, 18 Feb 2021 (09:33 IST)
ಬೆಂಗಳೂರು: ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗ ಅಮರ್ಥ್ಯ ಹೆಗಡೆ ಆರತಕ್ಷತೆಗೆ ರಾಜಕೀಯ ಗಣ್ಯರ ದಂಡೇ ಹರಿದುಬಂದಿದೆ.
ನಿನ್ನೆ ಸಂಜೆ ನಗರದ ಪಂಚತಾರಾ ಹೋಟೆಲ್ ಒಂದರಲ್ಲಿ ನಡೆದ ಅದ್ಧೂರಿ ಆರತಕ್ಷತೆಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜೂಬಾಯಿ ವಾಲಾ, ಮಾಜಿ ಕೇಂದ್ರ ಸಚಿವ ಕಮಲ್ ಪಂಥ್ ಸೇರಿದಂತೆ ಘಟಾನುಘಟಿ ನಾಯಕರು ಆಗಮಿಸಿ ವಧೂವರರಿಗೆ ಶುಭ ಕೋರಿದ್ದಾರೆ. ರಾಹುಲ್, ಪ್ರಿಯಾಂಕರನ್ನು ಖುದ್ದಾಗಿ ಡಿಕೆಶಿಯೇ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದರು.