Webdunia - Bharat's app for daily news and videos

Install App

ರಾಹುಲ್ ಪಿಎಂ ಆಗೋದು ತಿರುಕನ ಕನಸು?

Webdunia
ಗುರುವಾರ, 16 ಮೇ 2019 (14:50 IST)
ಚಿಂಚೋಳಿ ಉಪ ಚುನಾವಣೆಯಲ್ಲಿ ವ್ಹಿ.ಸೋಮಣ್ಣ, ರವಿಕುಮಾರ್ ಜೋಡೆತ್ತಾಗಿ ದುಡಿದು ಕಾಂಗ್ರೆಸ್‌ನ್ನು ಧೂಳಿಪಟ ಮಾಡಿದ್ದಾರೆ. ಹೀಗಂತ ಬಿಜೆಪಿ ಮಾಜಿ ಸಚಿವ ಹೇಳಿದ್ದಾರೆ.

ಐವತ್ತು ವರ್ಷಗಳ ಕಾಲ ಕೋಲಿ ಸಮಾಜಕ್ಕೆ ಹೋರಾಟ‌ ಮಾಡಿದ್ದು ಸಾರ್ಥಕವಾಗಿದೆ. ನಮ್ಮ ಮನೆಯಲ್ಲಿ ಯಾವ ಮಂಗಲ ಕಾರ್ಯ ಆಗುವಂತಿಲ್ಲ, ಮಗ ಇಲ್ಲ, ಮಗಳಿಲ್ಲ. ಕೋಲಿ ಸಮಾಜಕ್ಕಾಗಿ ದುಡಿಯುವುದೇ ಮಂಗಲ ಕಾರ್ಯವಾಗಿದೆ ನನಗೆ. ಹೀಗಂತ ಬಿಜೆಪಿ‌ ಬೆಂಬಲಿತ ಕೋಲಿ ಸಮಾಜದ ಸಮಾವೇಶದಲ್ಲಿ ಬಾಬುರಾವ್ ಚಿಂಚನಸೂರ್ ಹೇಳಿಕೆ ನೀಡಿದ್ದಾರೆ.

ಚಿಂಚೋಳಿಯಲ್ಲಿ ಮಾತನಾಡಿದ ಅವರು, ದಿವಂಗತ ವಿಠ್ಠಲ್ ಹೇರೂರ್ ಕೋಲಿ ಸಮಾಜವನ್ನು ಎಸ್‌ ಟಿಗೆ ಸೇರಿಸಿ ಅಂತಾ ಎರಡು ವರ್ಷ ಸತ್ಯಾಗ್ರಹ ಮಾಡಿದ್ರು. ನಾನು ಗುಲಬರ್ಗಾದಲ್ಲಿ ಉರುಳುಸೇವೆ ಮಾಡಿದೆ.

ಐವತ್ತು ವರ್ಷ ಕೋಲಿ ಸಮಾಜದಿಂದ ಆರಿಸಿ ಹೋದ ಖರ್ಗೆ ಒಂದು ದಿನವೂ ಕೋಲಿ ಸಮಾಜದ ಹೆಸರು ಹೇಳಿಲ್ಲ ಎಂದರು. ರಾಹುಲ್ ಗಾಂಧಿ ಪ್ರೈಮ್ ಮಿನಿಸ್ಟರ್ ಆಗೋದು ತಿರುಕನ‌ ಕನಸು. ಎಸ್‌‌ಟಿ ಫೈಲ್ ನಿಮ್ಮ ಕೈಯಲ್ಲಿಲ್ಲ ಸಿದ್ದರಾಮಯ್ಯ, ಖರ್ಗೆರವರೇ ಮೋದಿರವರ ಕೈಯಲ್ಲಿದೆ.

ಎಸ್‌ಟಿ ಮಾಡಿದ್ರೆ ನಮ್ಮ ಇಕ್ವಲ್ ಆಗ್ತಾರೆ ಅಂತಾ ತಲೆ ಮೇಲೆ ಕಾಲಿಟ್ರು ಅಂತ ಮಲ್ಲಿಕಾರ್ಜುನ ಖರ್ಗೆಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಟಾಂಗ್ ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments