Select Your Language

Notifications

webdunia
webdunia
webdunia
webdunia

ಮುಚ್ಚಿದ್ದ ವಿವಾದಾತ್ಮಕ ಪತ್ರಿಕೆಗೆ ಮತ್ತೆ ಚಾಲನೆ ನೀಡಲಿರುವ ರಾಹುಲ್ ಗಾಂಧಿ

ಮುಚ್ಚಿದ್ದ ವಿವಾದಾತ್ಮಕ ಪತ್ರಿಕೆಗೆ ಮತ್ತೆ ಚಾಲನೆ ನೀಡಲಿರುವ ರಾಹುಲ್ ಗಾಂಧಿ
Bangalore , ಭಾನುವಾರ, 11 ಜೂನ್ 2017 (10:53 IST)
ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ವಿವಾದಿತ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಮತ್ತೆ ಚಾಲನೆ ನೀಡಲು ಅವರು ಬೆಂಗಳೂರಿಗೆ ಬರುತ್ತಿದ್ದಾರೆ.


 
ನೆಹರು ಕುಟುಂಬದ ಟ್ರಸ್ಟ್ ಮೂಲಕ ನಡೆಯುತ್ತಿದ್ದ ಕಾಂಗ್ರೆಸ್ ಮುಖವಾಣಿಯನ್ನು ಮತ್ತೆ ಹೊಸದಾಗಿ ಆರಂಭಿಸಲು ಪಕ್ಷ ನಿರ್ಧರಿಸಿದೆ. ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅಪರಾಹ್ನ ಪಕ್ಷದ ಕಾರ್ಯಕರ್ತರೊಂದಿಗೆ ಮುಂಬರುವ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಲಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಚುನಾವಣೆಗೆ ಬೇಕಾದ ಪೂರ್ವ ಸಿದ್ಧತೆ ನಡೆಸಲು ರಾಹುಲ್ ರಾಜ್ಯದ ಮುಖಂಡರಿಗೆ ಸೂಚಿಸಲಿದ್ದಾರೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳು ರಾಹುಲ್ ಭೇಟಿಗೆ ತುದಿಗಾಲಲ್ಲಿ ನಿಂತಿದ್ದು, ಲಾಬಿ ನಡೆಸಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

96 ಗಂಟೆಗಳಲ್ಲಿ 13 ಉಗ್ರರ ಹತ್ಯೆ