Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಅವರೇ ಕಂಬಿ ಇಲ್ಲದ ರೈಲು ಬಿಡೋದು ನಿಲ್ಲಿಸಿ: ಆರ್ ಅಶೋಕ್

R Ashok
ಬೆಂಗಳೂರು: ಡಿಕೆ ಶಿವಕುಮಾರ್ ಅವರೇ ಕಂಬಿ ಇಲ್ಲದೇ ರೈಲು ಬಿಡೋದು ನಿಲ್ಲಿಸಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸಾಧನಾ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಸರ್ಕಾರದ ಸಾಧನೆ ಬಗ್ಗೆ ಮಾತನಾಡಿದ್ದರು. ಇದಕ್ಕೆ ಅಶೋಕ್ ಈ ರೀತಿ ತಿರುಗೇಟು ನೀಡಿದ್ದಾರೆ. ‘ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೆ, ಹಸಿ ಹಸಿ ಸುಳ್ಳು ಹೇಳಿ “ಕಂಬಿ ಇಲ್ಲದೆ ರೈಲು ಬಿಡುವ” ಕೆಲಸವನ್ನು ಇನ್ನಾದರೂ ನಿಲ್ಲಿಸಿ!

ಬಜೆಟ್‌ನಲ್ಲಿ ಘೋಷಿಸಿದ 400 ಹೊಸ ಬಸ್‌ಗಳಿಗೆ ಇನ್ನೂ ಸಮರ್ಪಕ ಅನುದಾನವೇ ಬಿಡುಗಡೆಯಾಗಿಲ್ಲ. ಇತ್ತ ರಾಜ್ಯದ ಹಲವೆಡೆ ಹಳೆಯ ಬಸ್‌ಗಳಿಗೆ ಸರಿಯಾದ ಸಮರ್ಪಕ  ನಿರ್ವಹಣೆ ಇಲ್ಲದೆ, ಬಸ್‌ಗಳು ಮಧ್ಯ ರಸ್ತೆಯಲ್ಲಿ ಹಾಳಾಗುವುದು, ಬೆಂಕಿಗಾಹುತಿಯಾಗುವುದು, ಪ್ರಯಾಣಿಕರ ಜೀವ ಭಯದಲ್ಲಿ ಸಂಚರಿಸುವುದು ಸಾಮಾನ್ಯ ದೃಶ್ಯವಾಗಿದೆ. ಜಾಹೀರಾತು ಮತ್ತು ಭಾಷಣಗಳಲ್ಲಿ ಅಭಿವೃದ್ಧಿ ತೋರಿಸುವ ಬದಲು, ಮೊದಲು ಜನರ ಸುರಕ್ಷತೆ ಮತ್ತು ಮೂಲಭೂತ ಸಾರಿಗೆ ವ್ಯವಸ್ಥೆಯನ್ನು ಸರಿಪಡಿಸಿ. ಜನರಿಗೆ ಬೇಕಿರುವುದು ನಿಮ್ಮ ಸುಳ್ಳಿನ ಕಂತೆ ಅಲ್ಲ…ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇರುವಾಗ ಮೋದಿ ಇಟೆಲಿಯಲ್ಲಿ ಮಿಠಾಯಿ ಹಂಚುತ್ತಿದ್ದಾರೆ: ರಾಹುಲ್ ಗಾಂಧಿ