Select Your Language

Notifications

webdunia
webdunia
webdunia
webdunia

ಸದನ ಹಾಳು ಮಾಡ್ತಿರೋದು ಕಾಂಗ್ರೆಸ್, ನಾಳೆಯಿಂದ ಹೊಸ ರೀತಿ ಹೋರಾಟ ಶುರು ಮಾಡ್ತೀವಿ: ಆರ್ ಅಶೋಕ್

BJP protest
ಬೆಂಗಳೂರು: ಈ ಸರಕಾರವು ಒಬ್ಬ ಸಚಿವರಿಗಾಗಿ ಸದನ ನಡೆಸಲು ಸಮಸ್ಯೆ ತಂದೊಡ್ಡಿದೆ. ನಾವು ನೈಸ್, ಬಿಡದಿ, ಬರಗಾಲದ ಕುರಿತು ಚರ್ಚಿಸಬೇಕಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ತಿಳಿಸಿದ್ದಾರೆ. 
 
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಭ್ರಷ್ಟ, ದುಷ್ಟ ಸರಕಾರವನ್ನು ತೊಲಗಿಸುವ ವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು. ನಾಳೆ ವಾಲ್ಮೀಕಿ ಪ್ರತಿಮೆಯಿಂದ ನಾವು ಹೋರಾಟ ಆರಂಭಿಸುತ್ತೇವೆ ಎಂದು ಪ್ರಕಟಿಸಿದರು.
 
ದಲಿತರಿಗೆ ಸೇರಬೇಕಿದ್ದ 189 ಕೋಟಿ ಹಣವನ್ನು ನುಂಗಿ ಹಾಕಿದ್ದಾರೆ. ಕಳೆದ 4 ದಿನಗಳಿಂದ ನಾವು ದಲಿತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ ಎಂದ ತಿಳಿಸಿದರು. ಕೆಪಿಎಸ್ಸಿ, ರೇಷನ್ ಕಾರ್ಡ್ ಕುರಿತು ಚರ್ಚೆ ನಡೆಯಬೇಕಾಗಿದೆ. ಇಷ್ಟಿದ್ದರೂ ಹಠ ಹಿಡಿದು ಸದನವನ್ನು ಕಾಂಗ್ರೆಸ್ಸಿನವರು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
 
ಮಂತ್ರಿ ಮಂಡಲ ಮಾಡಲು ದುಡ್ಡು ಪಡೆದಿದ್ದು, ಇವರು ಅವರನ್ನು ತೆಗೆಯುತ್ತಿಲ್ಲ. ಕಾಂಗ್ರೆಸ್ ಹಠ ಹಿಡಿದು ಚರ್ಚೆಗೆ ಅನುಮತಿ ಕೊಡುತ್ತಿಲ್ಲ ಎಂದು ದೂರಿದರು. ಬರಗಾಲ ಪ್ರದೇಶ ಎಂದು ಘೋಷಿಸಿಲ್ಲ. ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಈ ಶಾಪ ಕಾಂಗ್ರೆಸ್ಸಿಗೆ ತಟ್ಟಲಿದೆ ಎಂದು ನುಡಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗಳಿಗೆ ಡಿಸಿಯಂತೆ ಎಂಟ್ರಿ ಕೊಡ್ತಿರುವ ಅಭಿಜಿತ್ ದಿಪ್ಕೆ: ಉತ್ತರ ಪ್ರದೇಶದಲ್ಲಿ ಹೊಸ ರೂಲ್ಸ್ ತಂದ ಸಿಎಂ ಯೋಗಿ